Slide
Slide
Slide
previous arrow
next arrow

ಸಿಲಿಂಡರ್ ಸ್ಫೋಟ:ಅಂಗಡಿ ಛಿದ್ರ

300x250 AD

ಸಿದ್ದಾಪುರ: ಅಂಗಡಿಯೊoದರಲ್ಲಿ ಸಿಲೆಂಡರ್ ಸ್ಫೋಟಗೊಂಡು ಅಂಗಡಿಯಲ್ಲಿದ್ದ ವಸ್ತುಗಳು ನಾಶವಾದ ಘಟನೆ ತಾಲೂಕಿನ ಬೇಡ್ಕಣಿ ಸಮೀಪವಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಕ್ರಾಸ್ ಬಳಿ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು, ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಘಟನೆಯಲ್ಲಿ ಸುಮಾರು 40 ಸಾವಿರ ಮೌಲ್ಯದ ವಸ್ತುಗಳು ನಾಶವಾಗಿದೆ ಎಂದು ತಿಳಿದುಬಂದಿದೆ. ಸ್ಫೋಟದ ರಭಸಕ್ಕೆ ಅಂಗಡಿ ಛಿದ್ರ ಛಿದ್ರವಾಗಿದೆ. ಅಲ್ಲಿದ್ದ ತಗಡು ಮತ್ತಿತರ ವಸ್ತುಗಳು ಚಲ್ಲಾ ಪಿಲ್ಲಿಯಾಗಿ ಬಿದ್ದಿವೆ. ಘಟನೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ.

300x250 AD
Share This
300x250 AD
300x250 AD
300x250 AD
Back to top