Slide
Slide
Slide
previous arrow
next arrow

ಆ.11ಕ್ಕೆ ಕೊಳಗಿಬೀಸ್‌ನಲ್ಲಿ ಯಕ್ಷಗಾನ ಪ್ರದರ್ಶನ

300x250 AD

ಶಿರಸಿ: ತಾಲೂಕಿನ ಕೊಳಗಿಬೀಸಿನ ಮಾರುತಿ ಮಂದಿರದಲ್ಲಿ ಅಗಸ್ಟ 11ರಂದು ಸಂಜೆ 4 ಘಂಟೆಗೆ ಸದ್ಬಾವನಾ ಸೇವಾ ಸಂಸ್ಥೆಯ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಇವರ ಪ್ರಾಯೋಜಕತ್ವದಲ್ಲಿ “ಇಂದ್ರಜಿತು ಕಾಳಗ” (ಸಮಯ ಮಿತಿ) ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಮಧ್ಯಾಹ್ನ 3.30 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು ಉದ್ಘಾಟಕರಾಗಿ ನಿವೃತ್ತ ರೇಷ್ಮೆ ಅಧಿಕಾರಿ ಆರ್.ಟಿ . ಭಟ್ಟ ಭಾಗವಹಿಸುವವರು.
ಅಧ್ಯಕ್ಷತೆಯನ್ನುಕೋಳಗಿಬೀಸ್ ಮಾರುತಿ ದೇವಸ್ಥಾನದ ಅಧ್ಯಕ್ಷ ಶ್ರೀಧರ ಹೆಗಡೆ, ಮುಖ್ಯ ಅತಿಥಿಯಾಗಿ ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ,ಸದ್ಬಾವನಾ ಸೊಸೈಟಿ ನಿರ್ದೇಶಕ ಎಂ.ಎಸ್. ಹೆಗಡೆ ನೆರ್ಲದ್ದ, ಕುಮಾರ ಭಟ್, ಕೋಳಗಿಬೀಸ್, ರಾಜ್ಯ ಕರಕುಶಲ ಪ್ರಶಸ್ತಿ ವಿಜೇತೆ ಶ್ರೀಮತಿ ಅಂಜನಾ ಹೆಗಡೆ, ಮಾರಿಕಾಂಬಾ ದೇವಸ್ಥಾನದ ಧರ್ಮದರ್ಶಿ ಶ್ರೀಮತಿ ವತ್ಸಲಾ ಹೆಗಡೆ ಭಾಗವಹಿಸಲಿದ್ದಾರೆoದು ಸಂಘಟಕರ ಪರವಾಗಿ ಜಿ.ವಿ.ಹೆಗಡೆ ಓಣಿಕೇರಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top