Slide
Slide
Slide
previous arrow
next arrow

ಮನೆ ಕುಸಿತ; ಉಪವಿಭಾಗಾಧಿಕಾರಿಯಿಂದ ಪರಿಶೀಲನೆ

300x250 AD

ಭಟ್ಕಳ: ಪಟ್ಟಣದ ಪರಶುರಾಮ ದೇವಸ್ಥಾನದ ಹಿಂಭಾಗದ ರಘುನಾಥ ನಾಯಕ ರಸ್ತೆಯಲ್ಲಿರುವ ಪಾಂಡುರಂಗ ಗೋವಿಂದ ಶಾನಭಾಗರ ಮನೆಯ ಹಿಂಭಾಗ ಮಳೆಯಿಂದಾಗಿ ಶನಿವಾರದಂದು ಬೆಳಗ್ಗೆ ಕುಸಿತ ಕಂಡಿದ್ದು, ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣಾಪಾಯಗಳು ಸಂಭವಿಸಿಲ್ಲ.

ಮನೆಯ ಹಿಂಭಾಗದ ಅಡುಗೆಮನೆ, ಶೌಚಾಲಯ, ಸ್ಟೋರ್ ರೂಮ್ ಮತ್ತು ನೀರಿನ ಟ್ಯಾಂಕ್ ಕುಸಿತಗೊಂಡಿದೆ. ಸ್ಥಳೀಯರ ಸಹಕಾರದಿಂದ ಮನೆಯಲ್ಲಿದ್ದವರನ್ನು ಮತ್ತು ಮನೆಯ ವಸ್ತುಗಳನ್ನು ಸ್ಥಳಾಂತರಗೊಳಿಸಲಾಗಿದೆ. ಮನೆಯ ಬೇರೆ ಬೇರೆ ಕಡೆ ಬಿರುಕು ಬಿಟ್ಟಿದ್ದು, ಮನೆಯವರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.

300x250 AD

ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಮಮತಾದೇವಿ ಪರಿಶೀಲಿಸಿದ್ದು, ಮುಂದಿನ ಕ್ರಮ ಕೈಗೊಳ್ಳಲು ಕಂದಾಯ ನಿರೀಕ್ಷಕರಿಗೆ ಸೂಚಿಸಿದ್ದಾರೆ.

Share This
300x250 AD
300x250 AD
300x250 AD
Back to top