Slide
Slide
Slide
previous arrow
next arrow

ಅಬಕಾರಿ ಕಚೇರಿಯಲ್ಲೆ ಅಬಕಾರಿ ಉಪನಿರೀಕ್ಷಕ ನೇಣಿಗೆ ಶರಣು

300x250 AD

ದಾಂಡೇಲಿ: ಯಾವುದೋ ವಿಷಯಕ್ಕೆ ಮನನೊಂದ ಅಬಕಾರಿ ಉಪ ನಿರೀಕ್ಷಕರೊಬ್ಬರು ಅಬಕಾರಿ ಕಚೇರಿಯಲ್ಲೆ ನೇಣಿಗೆ ಶರಣಾಗಿದ್ದಾರೆ.
ಕಳೆದ 25 ವರ್ಷಗಳಿಂದ ಅಬಕಾರಿ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದ 56 ವರ್ಷ ವಯಸ್ಸಿನ ಮೂಲತಃ ಹೊನ್ನವಾರ ತಾಲ್ಲೂಕಿನವರಾದ ಅಬಕಾರಿ ಉಪ ನಿರೀಕ್ಷಕ ಗಣೇಶ ವೈದ್ಯ ಅವರು ಶುಕ್ರವಾರ ನಸುಕಿನ ವೇಳೆಯಲ್ಲಿ ಅಬಕಾರಿ ಕಚೇರಿಯಲ್ಲೆ ನೇಣಿಗೆ ಶರಣಾಗಿದ್ದಾರೆ. ಮೃತರು ಅವಿವಾಹಿತರಾಗಿದ್ದು, ತಾಯಿ, ಇಬ್ಬರು ಸಹೋದರಿಯರು ಮತ್ತು ಓರ್ವ ಅಣ್ಣ ಹಾಗೂ ಅಪಾರ ಸಂಖ್ಯೆಯ ಬಂಧು- ಬಳಗವನ್ನು ಅಗಲಿದ್ದಾರೆ.
ಮೃತರ ಸಹೋದರ ಯಶವಂತ ವೈದ್ಯ ಅವರು ನಗರ ಠಾಣೆಯಲ್ಲಿ ದೂರು ನೀಡಿದ್ದು, ಸಹೋದರ ಜಿ.ವಿ.ವೈದ್ಯರ ಸಾವಿಗೆ ಅಬಕಾರಿ ಉಪ ನಿರೀಕ್ಷಕ ಮಂಜುನಾಥ ನಾಯಕ ಅವರೇ ಕಾರಣ ಎಂದಿದ್ದಾರೆ. ಜಿ.ವಿ.ವೈದ್ಯ ಅವರು ಮಂಜುನಾಥ ನಾಯಕರಿಗೆ ಕೊಟ್ಟ ಹಣವನ್ನು ಕೇಳಿದ್ದಕ್ಕೆ ತಾನು ಕೆಲಸ ಮಾಡುವ ಕೆಲಸದಲ್ಲಿ ಕಿರಿಕಿರಿ ಮಾಡುತ್ತಿದ್ದಾರೆಂದು ಆರೋಪಿಸಿ, ಆ ಕಾರಣಕ್ಕಾಗಿಯೇ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ದೂರಿನಲ್ಲಿ ವಿವರಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲೇ ಡೆತ್ ನೋಟ್ ಸಿಕ್ಕಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಆ ಬಳಿಕ ಅವರ ಹುಟ್ಟೂರಾದ ಹೊನ್ನಾವರಕ್ಕೆ ಮೃತದೇಹವನ್ನು ಕೊಂಡೊಯ್ಯಲಾಗಿದೆ.

300x250 AD
Share This
300x250 AD
300x250 AD
300x250 AD
Back to top