Slide
Slide
Slide
previous arrow
next arrow

ಧನ್ನಳ್ಳಿ-ಚಾರೆಕೋಣೆ ರಸ್ತೆ ಕಾಮಗಾರಿ ಉದ್ಘಾಟನೆ

300x250 AD

ಸಿದ್ದಾಪುರ: ತಾಲೂಕಿನ ನಿಲ್ಕುಂದ ಗ್ರಾಮ ಪಂಚಾಯತ ವ್ಯಾಪ್ತಿಯ ಧನ್ನಳ್ಳಿ-ಚಾರೆಕೋಣೆ ರಸ್ತೆ ಸುಧಾರಣೆ ರೂ.25 ಲಕ್ಷಗಳ ಕಾಮಗಾರಿಯ ಉದ್ಘಾಟನೆಯನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ, ಕಾಗೇರಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ರಾಜು ಹೆಗಡೆ, ಉಪಾಧ್ಯಕ್ಷರು, ಸದಸ್ಯರಾದ ಪಿ.ಟಿ.ಹೆಗಡೆ, ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಎಮ್.ಜಿ.ಹೆಗಡೆ ಗೆಜ್ಜೆ, ಮಾಜಿ ತಾಲೂಕ ಪಂಚಾಯತ ಸದಸ್ಯರಾದ ಮಾಬ್ಲೇಶ್ವರ ಹೆಗಡೆ, ಲೋಕೋಪಯೋಗಿ ಇಲಾಖೆಯ ಎಇಇ ರಾಜು ವೈ.ಎಮ್, ಪಿಡಿಒ ಪ್ರದೀಪ ಅಂಕೋಲಾ, ಊರನಾಗರೀಕರು ಉಪಸ್ಥಿತರಿದ್ದರು.
ನೂತನ ಕೊಠಡಿಯ ಉದ್ಘಾಟನೆ: ತಾಲೂಕಿನ ನಿಲ್ಕುಂದ ಪಂಚಾಯತ ವ್ಯಾಪ್ತಿಯ ಧನ್ನಳ್ಳಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಯ ಉದ್ಘಾಟನೆಯನ್ನು ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ, ಕಾಗೇರಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ರಾಜು ಹೆಗಡೆ, ಉಪಾಧ್ಯಕ್ಷರು, ಸದಸ್ಯರಾದ ಪಿ.ಟಿ.ಹೆಗಡೆ, ಎಸ್‌ಡಿಎಮ್‌ಸಿ ಮಾಜಿ ಪಧಾಧಿಕಾರಿಗಳು, ಶಿಕ್ಷಕರು, ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಎಮ್.ಜಿ.ಹೆಗಡೆ ಗೆಜ್ಜೆ, ತಾಲೂಕು ಪಂಚಾಯತಿ ಸದಸ್ಯರಾದ ಮಾಬ್ಲೇಶ್ವರ ಹೆಗಡೆ, ಎಇಇ ಸಂತೋಷ, ಬಿಇಒ ಸದಾನಂದ ಸ್ವಾಮಿ, ಪಿಡಿಒ ಪ್ರದೀಪ ಅಂಕೋಲಾ, ಊರನಾಗರೀಕರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top