Slide
Slide
Slide
previous arrow
next arrow

ಶಿವಾನಂದ ಕಳವೆಯಿಂದ ಪರಿಸರ ಪಾಠದ ಜೊತೆ ಬದುಕಿನ ಪಾಠ

300x250 AD

ಯಲ್ಲಾಪುರ: ಎಸ್‌ಎಸ್‌ಎಲ್‌ಸಿ ಕನ್ನಡ ಪಠ್ಯ `ಪರಿಸರ ಪಾಠ’ ಮಾಡಿರುವ ಶಿವಾನಂದ ಕಳವೆ ಇದೀಗ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಮಕ್ಕಳೊಂದಿಗೆ ಬೆರೆಯುತ್ತಿದ್ದಾರೆ. ತಮ್ಮ ಎಂದಿನ ಪರಿಸರ ಪಾಠದ ಜೊತೆ ಮಕ್ಕಳಿಗೆ ಬದುಕಿನ ಪಾಠ ಮಾಡುತ್ತಿದ್ದಾರೆ. ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಅವರು ಹಸ್ತಾಕ್ಷರ ನೀಡುತ್ತಿದ್ದಾರೆ.

ತಾಲೂಕಿನ ವಿಶ್ವದರ್ಶನ ಕನ್ನಡ ಮಾಧ್ಯಮ ಶಾಲೆಯಲ್ಲಿ ಅವರು ಗುರುವಾರ ಪರಿಸರ ಪಾಠ ಮಾಡಿದರು. ಬ್ರಿಟೀಷರು ಭಾರತಕ್ಕೆ ಬರುವ ಮುನ್ನ ಇಲ್ಲಿದ್ದ ಪರಿಸ್ಥಿತಿ, ನಂತರ ಆದ ಬೆಳವಣಿಗೆಗಳು, ನೀರಿನ ಮಹತ್ವ, ಕಾಳು ಮೆಣಸಿನ ಪ್ರವೇಶ, ಹುಲಿ ಬೇಟೆಯ ಸತ್ಯ, ಹಸಿವು-ಬಡತನದ ನಡುವೆ ಜನ ಕಟ್ಟಿಕೊಂಡ ಬದುಕು ಹಾಗೂ ಅಭಿವೃದ್ಧಿ ಹೆಸರಿನಲ್ಲಿ ಜಿಲ್ಲೆ ಕಳೆದುಕೊಂಡ ಹಲವು ಸಂಗತಿಗಳ ಬಗ್ಗೆ ಅವರು ದಾಖಲೆಗಳನ್ನು ಹಂಚಿಕೊಂಡರು. ಜಿಲ್ಲೆಯಲ್ಲಿ ನಡೆದ ಪರಿಸರ ಹೋರಾಟಗಳ ಬಗ್ಗೆ ವಿವರಿಸಿದರು.

300x250 AD

‘ಮೊದಲು 20 ನೇಗಿಲು ಹೊಂದಿದ್ದವನನ್ನು ಶ್ರೀಮಂತ ಎಂದು ಗುರುತಿಸಲಾಗುತ್ತಿತ್ತು. ಇದೀಗ ಹೆದ್ದಾರಿ ಪಕ್ಕ ಭೂಮಿ ಇದ್ದವರನ್ನು ಶ್ರೀಮಂತ ಎನ್ನಲಾಗುತ್ತದೆ. 1874ರಲ್ಲಿ ಚಕ್ಕಡಿ ಗಾಡಿ ಓಡಾಡುತ್ತಿದ್ದ ಸ್ಥಳ ಇದೀಗ ಹೆದ್ದಾರಿಯಾಗಿದೆ. ಬದಲಾದ ಕಾಲಘಟ್ಟದಲ್ಲಿ ಅಭಿವೃದ್ಧಿಯ ಜೊತೆ ಪೃಕೃತಿ ಆರಾಧನೆ ಅತಿ ಮುಖ್ಯವಾಗಿದೆ’ ಎಂದು ಅವರು ಕರೆ ನೀಡಿದರು.

Share This
300x250 AD
300x250 AD
300x250 AD
Back to top