Slide
Slide
Slide
previous arrow
next arrow

ಶಿಕ್ಷಕಿ ಆಶಾ ಶೆಟ್ಟಿಗೆ ಗುರು ಪ್ರತಿಭಾ ಪುರಸ್ಕಾರ

300x250 AD

 ಯಲ್ಲಾಪುರ: ತಾಲೂಕಿನ ಉಮ್ಮಚಗಿ ಸಮೀಪದ ಹಲಸಿನಕೊಪ್ಪ ಪ್ರಾಥಮಿಕ ಶಾಲೆಯ ಶಿಕ್ಷಕಿ ಆಶಾ ಶೆಟ್ಟಿ ಅವರಿಗೆ ಮೈಸೂರಿನ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ನೀಡುವ ಗುರು ಪ್ರತಿಭಾ ಪುರಸ್ಕಾರ ದೊರೆತಿದೆ.

    ಆಶಾ ಶೆಟ್ಟಿ ಅವರು ಪರಿಷತ್ತಿನ ಅಡಿಯಲ್ಲಿರುವ ಮಕ್ಕಳ ಸಾಹಿತಿ ಶಿಕ್ಷಕರ ವೇದಿಕೆಯ ಮುಖ್ಯಸ್ಥರಾಗಿ ಸಾವಿರಾರು ಶಿಕ್ಷಕರು, ವಿದ್ಯಾರ್ಥಿಗಳಿಗೆ ವಿನೂತನ ಆನ್ ಲೈನ್ ಸ್ಪರ್ಧೆ, ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿ ಗಮನ ಸೆಳೆದಿದ್ದಾರೆ. ಹಲವು ಉತ್ಸಾಹಿ ಶಿಕ್ಷಕರಿಗೆ ಅವಕಾಶ, ಮಾರ್ಗದರ್ಶನ ನೀಡುತ್ತ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಈ ಸೇವೆಯನ್ನು ಪರಿಗಣಿಸಿ ಪುರಸ್ಕಾರ ನೀಡಿದೆ.

300x250 AD

    ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆದ ರಾಜ್ಯ ಶೈಕ್ಷಣಿಕ ಸಮ್ಮೇಳನದಲ್ಲಿ ಆಶಾ ಶೆಟ್ಟಿ ಅವರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.

Share This
300x250 AD
300x250 AD
300x250 AD
Back to top