• Slide
    Slide
    Slide
    previous arrow
    next arrow
  • ಹಿಟ್ ಆಂಡ್ ರನ್: ಬಸ್ ಗುದ್ದಿ ಬೈಕ್ ಸವಾರ ದುರ್ಮರಣ

    300x250 AD

    ಶಿರಸಿ: ತಾಲೂಕಿನ ಹೆಗಡೆಕಟ್ಟಾ ಕ್ರಾಸ್ ಬಳಿ ಬೈಕ್ ಸವಾರನಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸೀಬರ್ಡ್ ಬಸ್ ಚಾಲಕ ಬೈಕ್ ಗೆ ಗುದ್ದಿ ಬೈಕ್ ಸವಾರನ ಮೇಲೆ ಹತ್ತಿಸಿ ಬಸ್ ನಿಲ್ಲಿಸದೆ ಬಸ್ ಚಲಾಯಿಸಿಕೊಂಡು ಹೋಗಿದ್ದು ಕತಗಾಲ್ ಸಮೀಪ ಬಸ್ ನ್ನು ಹಿಡಿದು ನಿಲ್ಲಿಸಲಾಗಿದೆ ಎಂದು ಮಾಹಿತಿ ದೊರಕಿದೆ.

    ದುರ್ಮರಣಕ್ಕೀಡಾದ ವ್ಯಕ್ತಿ ದಾಸನಗದ್ದೆ ಹೀಪನಳ್ಳಿಯ ವಿಶ್ವನಾಥ್ ಗಜಾನನ ಹೆಗಡೆ(53) ಎಂದು ಗುರುತಿಸಲಾಗಿದ್ದು,ಡಿಎಸ್ಪಿ ರವಿ ನಾಯ್ಕ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಹಿಟ್ ಆಂಡ್ ರನ್ ಪ್ರಕರಣ ದಾಖಲಾಗಿದ್ದು ಪಿಎಸ್ಸೈ ಶ್ಯಾಮ ಪಾವಸ್ಕರ್ ತನಿಖೆ ಮುಂದುವರೆಸಿದ್ದಾರೆ. .

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top