Slide
Slide
Slide
previous arrow
next arrow

ಬೇಡ್ತಿಯಲ್ಲಿ ತಗ್ಗಿದ ನೀರಿನ ಪ್ರಮಾಣ:ಸ್ಥಳೀಯರಿಂದ ಸೇತುವೆಯ ಮೇಲಿನ ಕಸ, ತ್ಯಾಜ್ಯಗಳ ಸ್ವಚ್ಛತೆ

300x250 AD

ಯಲ್ಲಾಪುರ: ತಾಲೂಕಿನಲ್ಲಿ ಕಳೆದ 3-4 ದಿವಸಗಳಿಂದ ಮಳೆ ಕಡಿಮೆಯಾಗಿದ್ದು, ಬೇಡ್ತಿ ನದಿಯಲ್ಲಿ ನೀರಿನ ಪ್ರಮಾಣ ತಗ್ಗಿದೆ.

ನೀರು ಕಡಿಮೆಯಾಗಿರುವುದರಿಂದ ಗುಳ್ಳಾಪುರ ಸಮೀಪದ ಫಣಸಗುಳಿ ಬಳಿ ನದಿಯಲ್ಲಿ ಮುಳುಗಿದ್ದ ತಾತ್ಕಾಲಿಕ ಸೇತುವೆಯ ಮೇಲೆ ಮತ್ತೆ ಓಡಾಟ ಆರಂಭವಾಗಿದೆ. ಆದರೆ ಸೇತುವೆ ಮುಳುಗಿದಾಗ ನದಿಯಲ್ಲಿ ಮಣ್ಣು, ಕಸ, ತ್ಯಾಜ್ಯಗಳು ಕೊಚ್ಚಿಕೊಂಡು ಸೇತುವೆಯ ಮೇಲೆ ಬಂದು ರಾಶಿ ಬಿದ್ದಿದ್ದು, ವಾಹನಗಳು ಮತ್ತು ಜನರ ಓಡಾಟಕ್ಕೆ ತೊಂದರೆಯಾಗಿದೆ.

300x250 AD

ಹಾಗಾಗಿ ಸ್ಥಳೀಯರು ಸೇತುವೆಯ ಮೇಲಿನ ಕಸ, ತ್ಯಾಜ್ಯಗಳನ್ನು ಸ್ವಚ್ಛಗೊಳಿಸಿ, ಓಡಾಟಕ್ಕೆ ಸೇತುವೆಯನ್ನು ಸಿದ್ಧಗೊಳಿಸುವಲ್ಲಿ ಶ್ರಮಿಸಿದರು. ಸೇತುವೆಯ ಅಕ್ಕಪಕ್ಕ ತುಂಬಿ ನಿಂತ ಮಣ್ಣನ್ನು ಜೆಸಿಬಿ ಸಹಾಯದಿಂದ ತೆಗೆದು, ನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಿಕೊಡಲಾಯಿತು. ಇದರಿಂದ ಸೇತುವೆ ಮುಳುಗಿ ಜನರ ಓಡಾಟಕ್ಕೆ ಉಂಟಾಗಿದ್ದ ಸಮಸ್ಯೆ ಸದ್ಯದ ಮಟ್ಟಿಗೆ ದೂರವಾದಂತಾಗಿದೆ.

Share This
300x250 AD
300x250 AD
300x250 AD
Back to top