Slide
Slide
Slide
previous arrow
next arrow

ಅಕ್ರಮವಾಗಿ ಇರಿಸಿಕೊಂಡಿದ್ದ ನಾಡಬಂದೂಕು ಪೊಲೀಸರ ವಶ: ಆರೋಪಿ ಪರಾರಿ

300x250 AD

ಯಲ್ಲಾಪುರ: ಅಕ್ರಮವಾಗಿ ಇರಿಸಿಕೊಂಡಿದ್ದ ಒಂಟಿ ನಳಿಕೆಯ ನಾಡಬಂದೂಕನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ತಾಲೂಕಿನ ನಂದೊಳ್ಳಿ ಸಮೀಪದ ಹುಲಗಾನಿನಲ್ಲಿ ನಡೆದಿದೆ.

ಹುಲಗಾನಿನ ಗೋಪಾಲಕೃಷ್ಣ ನಾರಾಯಣ ನಾಯ್ಕ ಎಂಬಾತ ಮನೆಯ ಪಕ್ಕದ ಶೆಡ್ ನಲ್ಲಿ ಅಕ್ರಮವಾಗಿ ನಾಡಬಂದೂಕು ಇರಿಸಿಕೊಂಡಿದ್ದ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ದಾಂಡೇಲಿ ಅರಣ್ಯ ಸಂಚಾರಿ ದಳದ ಸಿಐಡಿ ಪಿಎಸ್ಐ ಸಂಪತ್ ನೇತೃತ್ವದ ತಂಡ ಬಂದೂಕನ್ನು ವಶಪಡಿಸಿಕೊಂಡಿದೆ. ಆರೋಪಿ ಬಂದೂಕನ್ನು ಎಸೆದು ಪರಾರಿಯಾಗಿದ್ದಾನೆ.

300x250 AD

ಈ ಕುರಿತು ಭಾರತೀಯ ಆಯುಧ ಅಧಿನಿಯಮದನ್ವಯ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This
300x250 AD
300x250 AD
300x250 AD
Back to top