Slide
Slide
Slide
previous arrow
next arrow

ತಾಲೂಕಾ ಮಟ್ಟದ ಭಾಷಣ ಸ್ಪರ್ಧೆ:ಶ್ರೀಗೌರಿ ಭಟ್ ಪ್ರಥಮ ಸ್ಥಾನ

300x250 AD

ಯಲ್ಲಾಪುರ: ಪಟ್ಟಣದ ವೈಟಿಎಸ್ಎಸ್ ಪ.ಪೂ ಕಾಲೇಜಿನಲ್ಲಿ ಗುರುವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ವೈಟಿಎಸ್ಎಸ್ ಎನ್ನೆಸೆಸ್ ಘಟಕದ  ಆಶ್ರಯದಲ್ಲಿ ವಿಶ್ವಜನಸಂಖ್ಯಾ ದಿನಾಚರಣೆ ಅಂಗವಾಗಿ ಭಾಷಣ ಸ್ಪರ್ಧೆ ನಡೆಯಿತು.ಒಟ್ಟು 11 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಲೂಕಾ ಮಟ್ಟದ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಭಾಷಣ ಸ್ಪರ್ಧೆಯಲ್ಲಿ ವಿಶ್ವದರ್ಶನ ಕಾಲೇಜಿನ ಶ್ರೀಗೌರಿ ಎಂ ಭಟ್ಟ ಪ್ರಥಮ ಸ್ಥಾನ ಪಡೆದಿದ್ದಾರೆ.ಜಿಎಫ್.ಜಿ.ಸಿ ಕಾಲೇಜಿನ ಪೃಥ್ವಿ ಗಾಂವ್ಕಾರ ದ್ವಿತೀಯ,ಆಶಾ ಬೆಳ್ಳನವರ್ ತೃತೀಯ ಸ್ಥಾನ‌ ಪಡೆದಿದ್ದಾರೆ.

300x250 AD

ಪ್ರಾಂಶುಪಾಲೆ ವಾಣಿಶ್ರೀ ಹೆಗಡೆ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸವರಾಜ ಕನ್ನಕ್ಕನವರ್,ತಾಲೂಕಾ ವೈದ್ಯಾಧಿಕಾರಿ ಡಾ.ನರೇಂದ್ರ ಪವಾರ,ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ.ಭಟ್ಟ,ವ್ಯವಸ್ಥಾಪಕ ಎಸ್.ಎಸ್.ಪಾಟೀಲ್, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಪ್ರವೀಣ ಇನಾಂಮದಾರ,ಸಂದೀಪ ಕೋಡಿಯಾ,ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top