• Slide
    Slide
    Slide
    previous arrow
    next arrow
  • ಶ್ರೀಮಾತಾ ಸಂಸ್ಕೃತ ಕಾಲೇಜಿನ ಮೂವರು ವಿದ್ಯಾರ್ಥಿಗಳ ಸಾಧನೆ: ಉಪರಾಷ್ಟ್ರಪತಿಯಿಂದ ಪುರಸ್ಕಾರ

    300x250 AD

    ಯಲ್ಲಾಪುರ:  ತಾಲೂಕಿನ ಉಮ್ಮಚಗಿಯ ಶ್ರೀಮಾತಾ ಸಂಸ್ಕೃತ ಕಾಲೇಜಿನ ಜ್ಯೋತಿಷ್ಯ ವಿಭಾಗದ ಮೂವರು ವಿದ್ಯಾರ್ಥಿಗಳು ಎಂ.ಎ ಮತ್ತು ಬಿ.ಎ ಪರೀಕ್ಷೆಗಳಲ್ಲಿ ಸಾಧನೆ ಮಾಡಿ, ಬಂಗಾರದ ಪದಕ ಹಾಗೂ ಇಂಪೋಸಿಸ್ ಸಂಸ್ಥೆಯ ವಿಶೇಷ ಪುರಸ್ಕಾರವನ್ನು ತಮ್ಮದಾಗಿಸಿಕೊಂಡಿದ್ದಾರೆ.

     ಮಂಜುನಾಥ ಗಾಂವ್ಕಾರ ಎಂ.ಎ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಬಂಗಾರದ ಪದಕ ಪಡೆದಿದ್ದಾರೆ. ಗುರುಪ್ರಸಾದ ಹೆಗಡೆ ಹಾಗೂ ಗಣೇಶಪ್ರಸಾದ ಕೋಣೆಮನೆ ಇಂಪೋಸಿಸ್ ವಿಶೇಷ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

    300x250 AD

     ಈ ಮೂವರಿಗೆ ಬೆಂಗಳೂರಿನ ರಾಜಭವನದಲ್ಲಿ ನಡೆದ ಸಂಸ್ಕೃತ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪದಕ ಹಾಗೂ ಪುರಸ್ಕಾರ ನೀಡಿ ಗೌರವಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top