• Slide
    Slide
    Slide
    previous arrow
    next arrow
  • ಮನೆ ಮುಂಬಾಗಿಲು ಮುರಿದು ಚಿನ್ನಾಭರಣ ದೋಚಿದ ಕಳ್ಳರು

    300x250 AD

    ಮುರುಡೇಶ್ವರ: ಮಾವಳ್ಳಿ-1 ರ ಜನತಾ ಕಾಲೋನಿಯಲ್ಲಿ ಮನೆಯ ಬಾಗಿಲು ಮುರಿದು ಮನೆಯಲ್ಲಿದ್ದ ಸುಮಾರು 50 ರಿಂದ 60 ಗ್ರಾಂ ತೂಕದ ಚಿನ್ನಾಭರಣ ಕದ್ದು ಪರಾರಿಯಾಗಿರುವ ಘಟನೆ. ನಡೆದಿದೆ.

    ಮಾದೇವ ಈರಪ್ಪ ನಾಯ್ಕ ಎನ್ನುವವರ ಮನೆ ಕಳ್ಳತನವಾಗಿದೆ. ಕಳೆದ 15 ದಿನದ ಹಿಂದಷ್ಟೇ ಇವರ ತಂದೆ ನಿಧನರಾಗಿದ್ದು ಅವರ ಕಾರ್ಯ ಮಾಡಲು ತನ್ನ ಹೆಂಡತಿಯೊಂದಿಗೆ ಜನತಾ ಕಾಲೋನಿಯಲ್ಲಿರುವ ತಮ್ಮ ಹಳೆಯ ಮನೆಗೆ ಹೊಗಿ ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಿ ಮರು ದಿನ ಬೆಳ್ಳಿಗ್ಗೆ ಮನೆಗೆ ಬಂದು ನೋಡಿದಾಗ ಮನೆಯ  ಮುಂಬಾಗಿಲು ಮುರಿದು ಕಳ್ಳತನ ಮಾಡಿರುವುದನ್ನು ಗಮನಿಸಿದ ಮನೆಯ ಮಾಲೀಕ ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ.

    ಸ್ಥಳಕ್ಕೆ ಬಂದ ಪೊಲೀಸರು ಮನೆ ಬಾಗಿಲು ತೆರೆದು ನೋಡಿದಾಗ ಕಳ್ಳರು ಮುಂಬಾಗಿಲಿನ ಇಂಟರ್ ಲಾಕ್ ಮುರಿದು ಮನೆಯ ಒಳಗಡೆ ಪ್ರವೇಶಿಸಿ ಕೋಣೆಯಲ್ಲಿರುವ ಕಪಾಟನ್ನು ಮುರಿದು ಸುಮಾರು 2 ಲಕ್ಷ 80 ಸಾವಿರ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.

    300x250 AD

    ಕಳುವಾದ ಚಿನ್ನಾಭರಣಗಳು: 7 ಬಂಗಾರದ ಉಂಗುರ , 2 ಬಂಗಾರದ ಬಳೆ, 1 ಬಂಗಾರದ ಬ್ರಾಸ್ ಲೈಟ್,  1 ಬಂಗಾರದ ಚೈನ್, 2 ಬಂಗಾರದ ನೆಕ್ಲೆಸ್ ಗಳು ಕಳ್ಳತನವಾದೆ . ಇವೆಲ್ಲ ಚಿನ್ನಾಭರಣ ಇವರ ಮದುವೆಗೆ ಬಂದ ಉಡುಗೊರೆಗಳಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ. ಈ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top