• Slide
    Slide
    Slide
    previous arrow
    next arrow
  • ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಅಂಬ್ಯುಲೆನ್ಸ್: ಮೂವರ ದುರ್ಮರಣ

    300x250 AD

    ಶಿರೂರು: ಅತೀ ವೇಗದಿಂದ ಬಂದ ಅಂಬುಲೈನ್ಸ್ ವೊಂದು ನಿಯಂತ್ರಣ ತಪ್ಪಿ ಶಿರೂರು ಟೋಲ್ ಸಮೀಪದ ಕಂಬಕ್ಕೆ, ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದಿಂದಾಗಿ ಹೊನ್ನಾವರದ ವ್ಯಕ್ತಿ ಸೇರಿ ಮೂವರು ದುರ್ಮರಣಕ್ಕೀಡಾಗಿದ್ದಾರೆ. ಹೊನ್ನಾವರದ ಶ್ರೀದೇವಿ ಆಸ್ಪತ್ರೆಯ ರೋಗಿಗಳನ್ನು ಸಾಗಿಸುವ ಅಂಬ್ಯುಲೆನ್ಸ್ ಇದಾಗಿದ್ದು ಗಣೇಶ್ ಶೇಜವಾಡಕರ್ ಎಂಬುವವರಿಗೆ ಸೇರಿದ ವಾಹನವಾಗಿದೆ.

    ಭಟ್ಕಳದ ಕಡೆ ವೇಗದಿಂದ ಬಂದ ಅಂಬ್ಯುಲೆನ್ಸ್ ಚಾಲಕನ ನಿಯಂತ್ರಣಕ್ಕೆ ಸಿಗದೇ ಶಿರೂರಿನ ಟೋಲ್ ನಾಕದ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಟೋಲ್ ಬಳಿಯ ಬ್ಯಾರಿಕೇಡ್ ಸರಿಸಲು ಹೋದ ಟೋಲ್ ಸಿಬ್ಬಂದಿಯೂ ಕೂಡ ಅಂಬ್ಯುಲೆನ್ಸ್ ಅಡಿಯಲ್ಲಿ ಸಿಲುಕಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ.

    300x250 AD

    Share This
    300x250 AD
    300x250 AD
    300x250 AD
    Leaderboard Ad
    Back to top