• Slide
    Slide
    Slide
    previous arrow
    next arrow
  • ವಿವಿ ಮಟ್ಟದ ಚೆಸ್ ಪಂದ್ಯಾವಳಿ: ಸುಜಿತ್ ಪ್ರಥಮ

    300x250 AD

    ಕುಮಟಾ: ತಾಲೂಕಿನ ವಿವೇಕನಗರ ನಿವಾಸಿ ಎಚ್.ಎ.ಸುಜಿತ್, ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿ ಸೇಂಟ್ ಇಗ್ನೀಸ್ ಕಾಲೇಜ್ ಮಂಗಳೂರಿನಲ್ಲಿ ನಡೆದ ವಿಶ್ವವಿದ್ಯಾನಿಲಯ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ಟ್ರೋಫಿಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಸಾಧನೆ ಮಾಡಿದ್ದಾನೆ. ಪ್ರಸ್ತುತ ಈತನು ತ್ರಿಶಾ ಉಡುಪಿ ಕಾಲೇಜಿನಲ್ಲಿ ಬಿ.ಕಾಂ ಜೊತೆ ಜೊತೆಗೆ ಸಿ.ಎ ಅಧ್ಯಯನ ಮಾಡುತ್ತಿದ್ದಾನೆ.

    ಸುಜಿತ್ ತಾಲೂಕಿನ ವಿವೇಕನಗರ ನಿವಾಸಿ, ಉಪನ್ಯಾಸಕ ಅರುಣ ಹೆಗಡೆ ಹಾಗೂ ಅನ್ನಪೂರ್ಣ ಅವರ ಪುತ್ರನಾಗಿದ್ದಾನೆ. ಪ್ರಾರಂಭದಿಂದಲೂ ಓದಿನ ಜೊತೆಗೆ ಚೆಸ್‌ನಲ್ಲಿ ಆಸಕ್ತಿ ಹೊಂದಿದ್ದ ಈತ, ಚೆಸ್ ಅನ್ನೂ ರೂಢಿಸಿಕೊಂಡು ಬಂದಿದ್ದ. ಈತನ ಸಾಧನೆಗೆ ಕುಟುಂಬದ ಸದಸ್ಯರು, ಕಾಲೇಜಿನ ಪ್ರಮುಖರು ಹಾಗೂ ಹಿತೈಶಿಗಳು ಅಭಿನಂದನೆ ಸಲ್ಲಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top