Slide
Slide
Slide
previous arrow
next arrow

ಭಾರಿ ಗಾತ್ರದ ಮರ ಬಿದ್ದು ಅಡಿಕೆ ಮರಗಳು ನಾಶ

300x250 AD

ಜೊಯಿಡಾ: ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಶೇವಾಳಿ ಗ್ರಾಮದ ಶ್ರೀನಿವಾಸ ಭಟ್ಟ ಕೊಂಬಾ ಎಂಬುವವರ ತೋಟದಲ್ಲಿ ಭಾರಿ ಗಾತ್ರದ ಮರವೊಂದು ಗಾಳಿ- ಮಳೆಯಿಂದಾಗಿ ಬಿದ್ದ ಪರಿಣಾಮ 30 ಕ್ಕೂ ಹೆಚ್ಚಿನ ಫಲ ಬರುವ ಅಡಿಕೆ ಮರಗಳು ಮುರಿದು ಹಾಳಾಗಿವೆ.

ತಾಲೂಕಿನಾದ್ಯಂತ ಸತತವಾಗಿ ಗಾಳಿ ಮಳೆಯಾಗುತ್ತಿರುವ ಕಾರಣ ಮರಗಳು ಮುರಿದು ಬೀಳುತ್ತಿವೆ. ಗುಡ್ಡಗಳು ಕುಸಿಯುತ್ತಿದ್ದು, ಅಡಿಕೆ, ಭತ್ತ ಬೆಳೆಯುವ ರೈತರು ಸಂಕಷ್ಟ ಎದುರಿಸುವಂತಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ರೀನಿವಾಸ ಭಟ್ಟ ಕೊಂಬಾ, ಕಳೆದ 25 ವರ್ಷಗಳಿಂದ ಮಕ್ಕಳಂತೆ ಸಾಕಿ ಅಡಿಕೆ ಮರಗಳನ್ನು ಬೆಳೆಸಿದ್ದೆ. ಪಕ್ಕದ ಅರಣ್ಯದಲ್ಲಿದ್ದ ಮರ ಬಿದ್ದು ಅಡಿಕೆ ಮರಗಳು ಮುರಿದು ಲಕ್ಷಾಂತರ ರೂ. ಹಾನಿ ಉಂಟಾಗಿದೆ. ಸರ್ಕಾರದವರು ಪರಿಹಾರ ನೀಡಬೇಕೆಂದು ಕೇಳಿಕೊಂಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top