• Slide
    Slide
    Slide
    previous arrow
    next arrow
  • ನಿರಂತರ ಸುರಿದ ಮಳೆ: ಹಲವು ಮನೆಗಳಿಗೆ ಹಾನಿ

    300x250 AD

    ಸಿದ್ದಾಪುರ: ತಾಲೂಕಿನಲ್ಲಿ ಎಲ್ಲಡೆಯಂತೆ ನಿರಂತವಾಗಿ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಧರೆ ಕುಸಿತ ಹಾಗೂ ಮರಗಳು ಮುರಿದು ಬಿದ್ದು ಮನೆಗಳಿಗೆ ಹಾನಿಗಳಾಗಿವೆ. ಯಾವುದೇ ಜೀವ ಹಾನಿ ಆಗಿಲ್ಲ. ಈವರೆಗೆ ತಾಲೂಕಿನಲ್ಲಿ 1504 ಮೀ.ಮೀ. ಮಳೆಯಾಗಿದೆ.

    ತಾಲೂಕಿನ ಹೊನ್ನೆಕೊಂಬು ಗ್ರಾಮದ ಗಣಪತಿ ನಾಯ್ಕರವರ ವಾಸದ ಮನೆಯ ಪಕ್ಕದ ಧರೆ ಸೋಮವಾರ ರಾತ್ರಿ ಕುಸಿದು ಬಿದ್ದಿವೆ. ಇದರಿಂದ ಮನೆಯ ಗೋಡೆ ಕುಸಿದು ಬಿದ್ದಿದ್ದು ಅಂದಾಜು 50 ಸಾವಿರದಷ್ಟು ಹಾನಿಯಾಗಿವೆ. ಸುರಿದ ಭಾರಿ ಗಾಳಿ ಮಳೆಯಿಂದಾಗಿ ಇಳಿಮನೆ ಗ್ರಾಮದ ನಿವಾಸಿಯಾದ ವೆಂಕಟ್ರಮಣ ನಾಯ್ಕರವರ ವಾಸದ ಕಚ್ಚಾ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಅಂದಾಜು 40 ಸಾವಿರ ರೂ. ಹಾನಿಯಾಗಿದೆ.

    300x250 AD

    ದಾನಮಾವ ಗ್ರಾಮದ ಗೊದ್ಲಮನೆ ಮಜರೆಯ ಗಜಾನನ ಹಸ್ಲರ್ ಅವರ ವಾಸದ ಕಚ್ಚಾ ಮನೆ ನಂ.139 ಸೋಮವಾರ ರಾತ್ರಿ ಸುರಿದ ಮಳೆ ಗಾಳಿಯಿಂದ ಗೋಡೆ ಕುಸಿದು ಮನೆಯ ಮೇಲ್ಚಾವಣಿಯು ಮುರಿದು ಬಿದ್ದಿವೆ. ಇದರಿಂದ ತೀವ್ರ ಪ್ರಮಾಣದಲ್ಲಿ ಹಾನಿಯಾಗಿರುತ್ತದೆ. ಅಂದಾಜು 85 ಸಾವಿರ ರೂ. ಹಾನಿಯಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top