Slide
Slide
Slide
previous arrow
next arrow

ಹೊಸತೋಟ ಕಿರು ಸೇತುವೆ ಸಂಪೂರ್ಣ ಶಿಥಿಲ:ಕ್ರಮ ಕೈಗೊಳ್ಳಲು ಆಗ್ರಹ

300x250 AD

ಸಿದ್ದಾಪುರ: ತಾಲೂಕಿನ ಬಿಳಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಕಂಡುಮನೆ ಹೊಸತೋಟ ಕಿರು ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದು ಸಾರ್ವಜನಿಕರಿಗೆ ಓಡಾಟಕ್ಕೆ ತೊಂದರೆ ಉಂಟಾಗಿದೆ. ಈ ಕುರಿತು ಜಿಲ್ಲಾಡಳಿತ ಗಮನಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಕಂಡುಮನೆ ಹೊಸತೋಟದಿಂದ ಬಿಳಗಿಗೆ ಸಂಪರ್ಕ ನೀಡುವ ರಸ್ತೆಯಲ್ಲಿ ಹೊಳೆಗೆ ಈ ಹಿಂದೆ ನಿರ್ಮಿಸಿದ ಕಿರು ಸೇತುವೆ ಮುರಿದುಬಿದ್ದು, ಸಾರ್ವಜನಿಕರಿಗೆ ಪ್ರಾಣಪಾಯವಾಗುವ ಮುನ್ಸೂಚನೆಗಳು ಕಂಡುಬರುತ್ತಿವೆ. ಇದರತ್ತ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕಿದೆ ಎಂದು ಸ್ಥಳೀಯ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಸೇತುವೆಯು ಕಳೆದ ಹಲವಾರು ವರ್ಷಗಳ ಹಿಂದೆ ಸೇತುವೆ ನಿರ್ಮಿಸಲಾಗಿತ್ತು. ಸೇತುವೆಯ ಮಧ್ಯದಲ್ಲಿ ಹಾಕಲಾಗಿದ್ದ ಕಂಬ ಮುರಿದು ಬಿದ್ದಿದೆ. ದಿನನಿತ್ಯ ವಿದ್ಯಾರ್ಥಿಗಳು ಸ್ಥಳೀಯ ಸಾರ್ವಜನಿಕ ರಸ್ತೆಯಲ್ಲಿ ಸೇತುವೆ ಬಳಸಿ ಓಡಾಡುವದು ಅನಿವಾರ್ಯವಾಗಿದೆ. ಇದರಿಂದ ಹೊಳೆ ತುಂಬಿಹರಿಯುವ ಸಂದರ್ಭದಲ್ಲಿ ಸೇತುವೆ ಮುರಿದು ಬೀಳುವ ಅಪಾಯವಿದೆ.

300x250 AD

ಸ್ಥಳೀಯ ಶಾಸಕರಿಗೆ ಹಲವಾರು ಬಾರಿ ಗಮನಕ್ಕೆ ತಂದರು ಸಹ ಯಾವುದೇ ಪ್ರಯೋಜನವಾಗಲಿಲ್ಲ. ಶಾಸಕರ ನಿರ್ಲಕ್ಷ ಕ್ಕೆ ಕಾರಣ ಏನೆಂದು ತಿಳಿದಿಲ್ಲ. ಕೂಡಲೇ ಜಿಲ್ಲಾಡಳಿತ ಹಾಗೂ ಶಾಸಕರು ಸಚಿವರು ಸಂಸದರು ಇದರತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.


Share This
300x250 AD
300x250 AD
300x250 AD
Back to top