• Slide
    Slide
    Slide
    previous arrow
    next arrow
  • ಬೈಕ್ ಗೆ ಲಾರಿ ಡಿಕ್ಕಿ: ಸವಾರರಿಬ್ಬರ ದುರ್ಮರಣ

    300x250 AD

    ಯಲ್ಲಾಪುರ: ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ಸೋಮವಾರ ರಾಷ್ಟ್ರೀಯ ಹೆದ್ದಾರಿ 63 ಮೇಲೆ ಗುಳ್ಳಾಪುರ ಸಮೀಪದ ಇಂಚರ ಹೊಟೇಲ್ ಬಳಿ ನಡೆದಿದೆ.

    ಮೃತಪಟ್ಟ ಸವಾರರನ್ನು ಮಹಂತೇಶ ರೇವಣಪ್ಪ ಶೀಲವಂತರ( 23) ಹುಬ್ಬಳ್ಳಿ,ಹಾಗೂ ಸುಮಿತ್ ಅಶೋಕ ಬಸವಾ (25) ಹಳೆ ಹುಬ್ಬಳ್ಳಿ ಎಂದು ಗುರುತಿಸಲಾಗಿದೆ.

    300x250 AD

    ಆರೋಪಿತ ಲಾರಿ ಚಾಲಕ ಶಿವರಾಜ ಚಿಂಚಲಿ ತನ್ನ ಗೂಡ್ಸ್ ಲಾರಿಯನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷಿತವಾಗಿ ಚಲಿಸಿಕೊಂಡು ಬಂದು ಗುಳ್ಳಾಪುರ ಸಮೀಪ ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳದೇ ವಿಭೂತಿಫಾಲ್ಸ್ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಹಿಂಬದಿಯ ಸವಾರ ಮಹಾಂತೇಶ ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಸವಾರ ಸುಮಿತ್ ಮಾರಣಾಂತಿಕ ಗಾಯಗೊಂಡು ಯಲ್ಲಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top