ಸಿದ್ಧಾಪುರ; ಕಲ್ಲೂರಿನ ಸ್ಥಳೀಯ ಸ ಹಿ ಪ್ರಾ ಶಾಲೆಯಲ್ಲಿ ಅರಣ್ಯ ಇಲಾಖೆ ಮತ್ತು ಶಾಲೆಯ ಸಹಯೋಗದಲ್ಲಿ ಬಿತ್ತೋತ್ಸವ ಕಾರ್ಯಕ್ರಮದಡಿ ನಡೆದ ಸಭಾ ಕಾರ್ಯಕ್ರಮದಲ್ಲಿ ಫಾರೆಸ್ಟರ್ ಮಂಜುನಾಥ ಮಾತನಾಡಿದರು.
ಪರಿಸರದಲ್ಲಿ ಕಾಡು ಮತ್ತು ವನ್ಯಜೀವಿಗಳ ಮಹತ್ವದ ಕುರಿತು ಹೇಳಿದರು. ಮುಂದಿನ ಪೀಳಿಗೆಗೆ ಇಂದು ನಾವು ಕಾಡನ್ನು ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.
ಫಾರೆಸ್ಟ್ ಗಾರ್ಡ್ ಅಮರ್ರವರು ಪ್ರತಿಯೊಬ್ಬರಲ್ಲಿ ಪರಿಸರದ ಅರಿವು ಆದಲ್ಲಿ ಮಾತ್ರ ಪರಿಸರದ ರಕ್ಷಣೆ ಸಾಧ್ಯ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು ಕಾರ್ಯಕ್ರಮದಲ್ಕಿ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ರಾಜು , ದೇವಿದಾಸ್. ಸಹಕರಿಸಿದರು ವೇದಿಕೆಯಲ್ಲಿ ಪ್ರಭಾಕರ ,ಮಂಜಪ್ಪ,ಚಂದ್ರಕಾಂತ್ ನಾಯ್ಕ ,ಆನಂದನಾಯ್ಕ ಉಪಸ್ಥಿತರಿದ್ದರು.
ನಿಖಿತಾ ಸಗಡಿಗರು ಪ್ರಾರ್ಥನೆ ಗೀತೆಹಾಡಿದರು ಮುಖ್ಯಾಧ್ಯಾಪಕ ಶ್ರೀಕಾಂತ ನಾಯ್ಕ ಸ್ವಾಗತಿಸಿ ನಿರ್ವಹಿಸಿದರು ಶಾಲಾ ಸಿಬ್ಬಂದಿಗಳು ಸಹಕರಿಸಿದರು ನಂತರ ಶಾಲಾ ವಿದ್ಯಾರ್ಥಿಗಳು ಪಾಲಕರು ಸಾರ್ವಜನಿಕರಿಂದ ವಿವಿಧ ಮರಗಳ ಬೀಜಗಳನ್ನು ಬಿತ್ತಲಾಯಿತು ಇದಕ್ಕೆ ಅರಣ್ಯಇಲಾಖೆಯ ಸಿಬ್ಬಂದಿಗಳು ಸಹಕರಿಸಿದರು.