Slide
Slide
Slide
previous arrow
next arrow

ಆಕಸ್ಮಿಕ ಬೆಂಕಿ: ಹೊತ್ತುರಿದ ಮನೆ

300x250 AD

ಹೊನ್ನಾವರ : ಪಟ್ಟಣದ ಬಾಂದೇಹಳ್ಳದ ಶಾಂತಿನಗರದಲ್ಲಿ ಆಕಸ್ಮಿಕವಾಗಿ ತಗುಲಿದ ಬೆಂಕಿಯಿಂದ ಮನೆಯೊಂದು ಹೊತ್ತುರಿದ ಘಟನೆ ಶುಕ್ರವಾರ ಸಂಜೆಯ ವೇಳೆ ನಡೆದಿದೆ.

ಶಾಂತಿನಗರದ ಬಾಂದೇಹಳ್ಳದ ನಿವಾಸಿಯಾಗಿರುವ ಜ್ಯೋತಿ ಮಾರ್ಟಿನ್ ಜೋನ್ಸಾಲಿಸ್ ಎಂಬುವರ ಮನೆ ಇದಾಗಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಈ ಘಟನೆ ನಡೆದಿದೆ. ಇನ್ನೂ ಜ್ಯೋತಿ ಮಾರ್ಟಿನ್‌ ಜೋನ್ಸಾಲಿಸ್‌ ಪಟ್ಟಣದ ಎಂಪಿಇ ಸೊಸೈಟಿಯ ಸಿಬಿಎಸ್‌ಸಿ ಸ್ಕೂಲ್‌ನಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದು, ಪ್ರತಿದಿನ ಎಂದಿನಂತೆ ಶಾಲೆಗೆ ಹೋಗಿ ಬಂದು ಬಳಿಕ ಚರ್ಚ್‌ಗೆ ತೆರಳಿ ಪೂಜೆಯಲ್ಲಿ ಭಾಗಿಯಾಗಿ ಬರುತ್ತಿದ್ದರು. ಶುಕ್ರವಾರ ಕೂಡ ಚರ್ಚ್‌ಗೆ ಹೋಗುವ ವೇಳೆ ಏಕಾಏಕಿ ಕಾಣಿಸಿಕೊಂಡ ಸಣ್ಣ ಪ್ರಮಾಣದ ಬೆಂಕಿ ಈಡೀ ಮನೆಗೆ ಆವರಿಸಿಕೊಂಡಿದೆ. ಮನೆ ಹೊತ್ತಿಯುರಿಯುತ್ತಿದ್ದನ್ನು ಕಂಡು ಜ್ಯೋತಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಸಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕದ ದಳ ಹಾಗೂ ಹೊನ್ನಾವರ ಪೋಲಿಸರು ಭೇಟಿ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top