Slide
Slide
Slide
previous arrow
next arrow

ಕೋವಿಡ್’ನಿಂದ ಮೃತಪಟ್ಟ ಕಾರ್ಮಿಕನ ಕುಟುಂಬಸ್ಥರಿಗೆ ಪರಿಹಾರ ಧನ ವಿತರಣೆ

300x250 AD

ದಾಂಡೇಲಿ: ಕೋವಿಡ್‌ನಿಂದ ಮೃತಪಟ್ಟ ಯಲ್ಲಾಪುರದ ಕಾರ್ಮಿಕ ಶಿವರಾಮ ಕರುಮನಿ ಅವರ ಕುಟುಂಬಸ್ಥರಿಗೆ ರಾಜ್ಯ ಕಾರ್ಮಿಕ ವಿಮಾ ನಿಗಮದಿಂದ ಪರಿಹಾರ ಧನದ ಚೆಕ್ ಮತ್ತು ಮಾಸಿಕ ಪಿಂಚಣಿ ಮಂಜೂರಾತಿ ಪತ್ರವನ್ನು ಶುಕ್ರವಾರ ನಗರದ ಇಎಸ್ಐ ಆಸ್ಪತ್ರೆಯ ಕಟ್ಟಡದಲ್ಲಿರುವ ರಾಜ್ಯ ಕಾರ್ಮಿಕ ವಿಮಾ ನಿಗಮದ ಶಾಖಾ ಕಚೇರಿಯಲ್ಲಿ ವಿತರಣೆ ಮಾಡಲಾಯಿತು.

2021 ರಲ್ಲಿ ಯಲ್ಲಾಪುರದ ಕಾರ್ಮಿಕ ಶಿವರಾಮ ಕರುಮನಿ ಕೋವಿಡ್‌ನಿಂದ ಮೃತಪಟ್ಟ ಹಿನ್ನಲೆಯಲ್ಲಿ ಅವರ ಪತ್ನಿ ಗೀತಾ ಹಾಗೂ ಮಕ್ಕಳಾದ ವಿರಾಜ್ ಮತ್ತು ಅಂಶಿಕಾ ಇವರಿಗೆ ರಾಜ್ಯ ಕಾರ್ಮಿಕ ವಿಮಾನ ನಿಗಮದಿಂದ ಮಂಜೂರಾದ ರೂ: 5,72,202/- ಪರಿಹಾರ ಧನದ ಚೆಕ್ ಮತ್ತು ಪ್ರತಿ ತಿಂಗಳಿಗಾಗಿ ಮಂಜೂರಾಗಿರುವ ತಿಂಗಳ ಪಿಂಚಣಿ ಮೊತ್ತ ರೂ: 14,800/- ಇದರ ಮಂಜೂರಾತಿ ಆದೇಶ ಪತ್ರವನ್ನು ರಾಜ್ಯ ಕಾರ್ಮಿಕ ವಿಮಾ ನಿಗಮದ ದಾಂಡೇಲಿ ಶಾಖೆಯ ವ್ಯವಸ್ಥಾಪಕರಾದ ಮೋಹನ್ ವಿತರಿಸಿದರು.

300x250 AD

ಈ ಸಂದರ್ಭದಲ್ಲಿ ರಾಜ್ಯ ಕಾರ್ಮಿಕ ವಿಮಾ ನಿಗಮದ ದಾಂಡೇಲಿ ಶಾಖೆಯ ಸಿಬ್ಬಂದಿಗಳಾದ ಗುರುನಾಥ್ ಕುಸಳಿ ಹಾಗೂ ನಿತೀನ್ ಮತ್ತಿತರರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top