Slide
Slide
Slide
previous arrow
next arrow

ಸಂಪನ್ನಗೊಂಡ “ನಾದಪೂಜೆ” ಸಂಗೀತೋತ್ಸವ

300x250 AD

ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವಿನ ಮಠದಲ್ಲಿ
ಶ್ರೀ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳ ಅನುಗ್ರಹದಿಂದ ಶ್ರೀ ಲಕ್ಷ್ಮೀ ನರಸಿಂಹ ಸಂಸ್ಕೃತಿ ಸಂಪದ ಶ್ರೀಮನ್ನೆಲೆಮಾವು ಮಠ ಇದರ ಆಶ್ರಯದಲ್ಲಿ ,ಸ್ವರ ಸಂವೇದನಾ ಪ್ರತಿಷ್ಠಾನ ( ರಿ) ಗಿಳಿಗುಂಡಿ ಇವರಿಂದ ಪ್ರತಿ ಸಂಕಷ್ಟ ಚತುರ್ಥಿಯ ದಿನದಂದು ನಡೆಸುವ “ನಾದ ಪೂಜೆ”ಸಂಗೀತ ಕಾರ್ಯಕ್ರಮವು ಆ.22, ಗುರುವಾರದಂದು ನೆರವೇರಿತು.

ಕಲಾವಿದರಾಗಿ ಗುರುಪ್ರಸಾದ್ ಹೆಗಡೆ ಗಿಳಿಗುಂಡಿ. ಶ್ರೀಮತಿ ರೇಷ್ಮಾ ಭಟ್ ಕುಮಟಾ,ಎನ್.ಜಿ. ಹೆಗಡೆ ಕಪ್ಪೆಕೇರಿ ಹಾಗೂ ದೀಪಕ್ ಕುಲಕರ್ಣಿ U.S.A. ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಓಂಕಾರ ಭಜನಾ ಮಂಡಳಿ ತಟ್ಟಿಕೈ ಮತ್ತು ಶ್ರೀ ಸ್ವರಾಂಭಿಕಾ ಭಜನಾ ಮಂಡಳಿ ಹೂಡ್ಲಮನೆ ಇವರು ಭಜನೆಯನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮಕ್ಕೆ ಅನೇಕ ಸಂಗೀತಾಭಿಮಾನಿಗಳು ಆಗಮಿಸಿದ್ದರು. ವಿನಾಯಕ್ ಭಟ್ ನೆಲೆಮಾವು ಹಾಗೂ ದಿನೇಶ್ ಹೆಗಡೆ ಗಿಳಿಗುಂಡಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಜಿ.ಆರ್. ಭಾಗವತ್ ತ್ಯಾರ್ಗಲ್ ಸ್ವಾಗತಿಸಿದರು. ಕುಮಾರಿ ಪ್ರಾರ್ಥನಾ ಹೆಗಡೆ ಕಲಾವಿದರನ್ನು ಪರಿಚಯಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಮುರಾರ್ಜಿ ಹೊಸಮನೆ ಸಹಕರಿಸಿದರು,ಶ್ರೀ ಶ್ರೀ ಮಾಧವಾನಂದ ಭಾರತೀ ಮಹಾ ಸ್ವಾಮಿಗಳು ಕಲಾವಿದರಿಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

300x250 AD
Share This
300x250 AD
300x250 AD
300x250 AD
Back to top