Slide
Slide
Slide
previous arrow
next arrow

ಕೆ.ಆರ್.ರಮೇಶ ಜನ್ಮದಿನ: ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

300x250 AD

ದಾಂಡೇಲಿ : ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡರಾದ ಕೆ.ಆರ್.ರಮೇಶ ಜನ್ಮ ದಿನಾಚರಣೆಯ ನಿಮಿತ್ತವಾಗಿ ಶೇರಖಾನ್ ಗೆಳೆಯರ ಬಳಗದ ವತಿಯಿಂದ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ಮಂಗಳವಾರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶೇರಖಾನ್ ಇಬ್ರಾಹಿಂ ಲಿಂಬುವಾಲೆ, ಕೆ.ಆರ್.ರಮೇಶ ಅವರು ಜನಪರ ಕಾಳಜಿಯ ಮತ್ತು ಬಡವರ ಹಾಗೂ ಜನಸಾಮಾನ್ಯರ ಕಷ್ಟ ಸುಖಗಳಿಗೆ ಸ್ಪಂದಿಸುವ ಜನನಾಯಕರಾಗಿ ಸದಾ ತಮ್ಮನ್ನು ತಾವು ತೊಡಗಿಸಿಕೊಂಡಿರುವವರು. ಕೋವಿಡ್ ಸಂದರ್ಭದಲ್ಲಿ ಬಡವರಿಗೆ ಜನಸಾಮಾನ್ಯರಿಗೆ ಕೆ.ಆರ್‌.ರಮೇಶ್ ಅವರು ಮಾಡಿದ ಸಹಾಯ ಸದಾ ಸ್ಮರಣೀಯ. ಬಡ ಮಕ್ಕಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡುತ್ತಲೆ ಬಂದಿರುವ ಮೇರು ವ್ಯಕ್ತಿತ್ವದ ನಾಯಕ ಕೆ.ಆರ್.ರಮೇಶ ಅವರ ಜನ್ಮದಿನಾಚರಣೆಯನ್ನು ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಆಚರಿಸುತ್ತಿದ್ದೇವೆ. ಕೆ.ಆರ್.ರಮೇಶ ಅವರಿಗೆ ಇನ್ನಷ್ಟು, ಮತ್ತಷ್ಟು ಜನಸೇವೆ ಮಾಡಲು ಭಗವಂತ ಶಕ್ತಿಯನ್ನು ಕೊಡಲಿ ಅವರಿಗೆ ಆಯುರಾರೋಗ್ಯ ಭಾಗ್ಯವನ್ನು ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸಿದರು.

300x250 AD

ಈ ಸಂದರ್ಭದಲ್ಲಿ ಶೇರಖಾನ್ ಗೆಳೆಯರ ಬಳಗದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top