Slide
Slide
Slide
previous arrow
next arrow

ಗವಿನಗುಡ್ಡದಲ್ಲಿ ಪ್ರಾಣಿಯ ಅಂಗಾಂಗ ಪತ್ತೆ: ಪ್ರಕರಣ ದಾಖಲು: ಅಧಿಕಾರಿಗಳಿಂದ ಪರಿಶೀಲನೆ

300x250 AD

ಸಿದ್ದಾಪುರ: ತಾಲೂಕಿನ ಗವಿನಗುಡ್ಡ ಬೆಟ್ಟದಲ್ಲಿ ನಿಡಗೋಡ ಉಪವಲಯ ಅರಣ್ಯಾಧಿಕಾರಿ ನರೇಂದ್ರನಾಥ ಕದಂ ಗಸ್ತು ಸಂಚರಿಸುವ ಸಮಯದಲ್ಲಿ ಅನುಮಾನಾಸ್ಪದವಾಗಿ ಸತ್ತ ಪ್ರಾಣಿಯ ಹೊಟ್ಟೆಯ ಭಾಗದ ಅಂಗಾಂಗಗಳು ದೊರೆತ ಸಂಗತಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಪಶು ವೈದ್ಯಾಧಿಕಾರಿಗಳೊಂದಿಗೆ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಕಾಡುಕೋಣದ ಅಂಗಾಂಗಗಳಿರಬಹುದೆಂದು ಅನುಮಾನಿಸಿ‌ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಶಿರಸಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಜಿ. ಆರ್ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ ಸಿ. ಎನ್. ಮಾರ್ಗದರ್ಶನದಲ್ಲಿ, ವಲಯ ಅರಣ್ಯಾಧಿಕಾರಿ ಅಜಯಕುಮಾರ ಎಮ್.ಎಸ್. ಘಟನೆ ನಡೆದ ಪ್ರದೇಶಕ್ಕೆ ವನ್ಯಜೀವಿ ವಿಧಿ ವಿಜ್ಞಾನ ತಂಡ ದಾಂಡೇಲಿರವರೊಂದಿಗೆ ಭೇಟಿ ನೀಡಿ ತನಿಖೆ ಮುಂದುವರೆಸಿದ್ದಾರೆ

300x250 AD
Share This
300x250 AD
300x250 AD
300x250 AD
Back to top