Slide
Slide
Slide
previous arrow
next arrow

ಚಾತುರ್ಮಾಸ್ಯ ಸಂಕಲ್ಪಿತ ಬ್ರಹ್ಮಾನಂದ ಸ್ವಾಮೀಜಿಗಳ ಆಶೀರ್ವಾದ ಪಡೆದ ಮಧು ಬಂಗಾರಪ್ಪ

300x250 AD

ಭಟ್ಕಳ: ತಾಲೂಕಿನ ಕರಿಕಲ್ ಸಮುದ್ರ ಕಿನಾರೆಯಲ್ಲಿರುವ ಶ್ರೀರಾಮ ಧ್ಯಾನ ಮಂದಿರದಲ್ಲಿ 13 ನೇ ದಿನದ ಚಾತುರ್ಮಾಸ್ಯ ವ್ರತದಲ್ಲಿರುವ ಶ್ರೀರಾಮ ಕ್ಷೇತ್ರದ ಪೀಠಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಶನಿವಾರ ರಾತ್ರಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು

ಮೊದಲು ಕರಿಕಲ್ ಧ್ಯಾನ ಮಂದಿರದ ಶ್ರೀ ರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ಸಮಸ್ತ ನಾಡಿನ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥಿಸಿಕೊಂಡರು ಬಳಿಕ ಸ್ವಾಮೀಜಿಯವರಿಗೆ ಸಚಿವ ಮಧು ಬಂಗಾರಪ್ಪ ತುಳಿಸಿ ಮಾಲೆ ಹಾಕಿದರು. ನಂತರ ಸಚಿವರಿಗೆ ಸ್ವಾಮೀಜಿಯವರು ಶಾಲು ಒದೆಸಿ ಶನ್ಮಾನಿಸಿ ಮಂತ್ರಾಕ್ಷತೆ ನೀಡಿದರು. ಬಳಿಕ ಸ್ವಾಮೀಜಿಯವರು ಕೆಲ ಕಾಲ ಅವರೊಂದಿಗೆ ಮಾತು ಕಥೆ ನಡೆಸಿದರು. ನಂತರ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಕ್ಕಳು ಸಚಿವ ಮಧು ಬಂಗಾರಪ್ಪನವರೊಂದಿಗೆ ಫೋಟೋ ತೆಗೆಸಿಕೊಂಡರು.

ಇದಕ್ಕೂ ಪೂರ್ವದಲ್ಲಿ ಬಂಗಾರಪ್ಪರವರ ಅನುಯಾಯಿಗಳಾದ ಶಿರಾಲಿಯ ಕೆ.ಎನ್ ನಾಯ್ಕ ಚಿತ್ರಾಪುರ ಅವರ ನಿವಾಸಕ್ಕೆ ತೆರಳಿ ಅವರ ಯೋಗಕ್ಷೇಮವನ್ನು ವಿಚಾರಿಸಿದರು.

300x250 AD

ಈ ಸಂದರ್ಭದಲ್ಲಿ ಶಿರಸಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಭೀಮಣ್ಣ ನಾಯ್ಕ , ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು

Share This
300x250 AD
300x250 AD
300x250 AD
Back to top