Slide
Slide
Slide
previous arrow
next arrow

ಜನ್ಮದಿನದಂದು ಅನಾಥಾಶ್ರಮಕ್ಕೆ ದಿನಸಿ ನೀಡಿದ ರಘು ನಾಯ್ಕ್

300x250 AD

ಶಿರಸಿ: ತಾಲೂಕಿನ ಗುಡ್ನಾಪೂರ ಗ್ರಾಮ ಪಂಚಾಯತಿಯ ಸದಸ್ಯ , ಸಮಾಜ ಸೇವಕ ರಘು ನಾಯ್ಕ್ ತಮ್ಮ ಹುಟ್ಟಿದ ದಿನದಂದು ಸಿದ್ದಾಪುರದ ಪುನೀತ್ ರಾಜ್‍ಕುಮಾರ್ ಆಶ್ರಯಧಾಮ ಅನಾಥಶ್ರಮ ಸೇವಾ ಸಮಿತಿಗೆ ತೆರಳಿ ಅಲ್ಲಿರುವ ಅನಾಥರಿಗೆ, ಅಂಗವಿಕಲರಿಗೆ ಅವಶ್ಯವಿರುವ ದಿನಸಿ ಸಾಮಗ್ರಿಗಳನ್ನು ನೀಡುವುದರ ಮೂಲಕ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿ ಮಾನವೀಯತೆ ಮೆರೆದರು.

ರಘು ನಾಯ್ಕ್ ಗ್ರಾಪಂ ಸದಸ್ಯರಾಗಿದ್ದು, ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿದ್ದಾರೆ. ಅವರು ತಮಗೆ  ದೊರೆಯುವ ಗೌರವ ಧನವನ್ನು ಬಡ  ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೀಡುವುದು, ಸರ್ಕಾರಿ ಶಾಲೆಗಳ ಅಭಿವೃದ್ಧಿ ಕಾರ್ಯದ ಜೊತೆಯಲ್ಲಿ ಹಲವು ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ.ಈ ಸಂದರ್ಭದಲ್ಲಿ ಪುನೀತ್ ರಾಜ್‍ಕುಮಾರ್ ಆಶ್ರಯಧಾಮ ಅನಾಥಶ್ರಮ ಸೇವಾ ಸಮಿತಿಯ ಮುಖ್ಯಸ್ಥ ನಾಗರಾಜ ನಾಯ್ಕ್ ರಘು ನಾಯ್ಕ್ ಅವರಿಗೆ ಅಭಿನಂದನೆ ಸಲ್ಲಿಸಿದರು.

300x250 AD
Share This
300x250 AD
300x250 AD
300x250 AD
Back to top