Slide
Slide
Slide
previous arrow
next arrow

ವಿಶೇಷ ಚೇತನ ಮಕ್ಕಳ ಕಾರ್ಯಕ್ರಮ: ಕಾರವಾರದ ಭುವನ್ ಉತ್ತಮ ಸಾಧನೆ

300x250 AD

ಕಾರವಾರ: ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ, ಉ.ಕ ಶಾಲಾ ಶಿಕ್ಷಣ ಇಲಾಖೆ, ಉ.ಕ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ, ಕಾರವಾರ ಇವರ ಆಶ್ರಯದಲ್ಲಿ ಮಾ.11 ರಂದು ನಡೆದ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಕ್ರೀಡೆ ಮತ್ತು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿದ ತಾಲೂಕಿನ ಶಿರವಾಡದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಭುವನ ಶೇಖರ್ ಬಾಂದೇಕರ ಈತನು ಉತ್ತಮ ಸಾಧನೆ ಮಾಡಿದ್ದಾನೆ.

ಓದುವಿಕೆ ಸ್ಪರ್ಧೆ, ಕಥೆ ಹೇಳುವಿಕೆ ಸ್ಪರ್ಧೆ, ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಚಿತ್ರಕಲೆ ಮತ್ತು ಲಿಂಬು ಮತ್ತು ಚಮಚ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಓಟ ಮತ್ತು ಬಕೆಟ್ ಮತ್ತು ಬಾಲ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡು ವೀರಾಗ್ರಣಿಯಾಗಿ ಗುರುತಿಸಿಕೊಂಡಿದ್ದಾನೆ. ಈ ಸಾಧನೆಗೆ ಶಿರವಾಡ ಕೆಪಿಎಸ್ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು, ಉಪಾಧ್ಯಕ್ಷರಾದ ಸಂದೀಪ ನಾಯ್ಕ, ಸದಸ್ಯರಾದ ರವಿ ಗೌಡ, ಆನಂದ ಹುಲಸ್ವಾರ, ಶ್ವೇತಾ ಕಾಣಕೋಣಕರ ಮತ್ತು ಶಾಲೆಯ ಮುಖ್ಯಾಧ್ಯಾಪಕ ಪ್ರಭಾಕರ ಚಿಕ್ಕನ್ಮನೆ ಅವರು ಸೇರಿದಂತೆ ಸಂಸ್ಥೆಯ ಪ್ರಾಂಶುಪಾಲರು, ಉಪನ್ಯಾಸಕರು, ಎಲ್ಲ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top