ಶಿರಸಿ: ರಾಜದೀಪ ಟ್ರಸ್ಟ್ (ರಿ) ಶಿರಸಿ, ಇವರ ಸಹಯೋಗದಲ್ಲಿ, ತವರುಮನೆ ಹೋಮ್ ಸ್ಟೇ ವತಿಯಿಂದ “ಗಾನ-ವೈಭವ” ಹಾಗೂ “ಆಲೆಮನೆ ಹಬ್ಬ” ಫೆ.8, ಶನಿವಾರದಂದು ಸಂಜೆ 5 ಗಂಟೆಯಿಂದ ಆಯೋಜಿಸಲಾಗಿದೆ. ಗಾನ ವೈಭವದಲ್ಲಿ ಭಾಗವತಿಕೆಯಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಗಾಯನದಲ್ಲಿ ರವಿ ಮೂರೂರು, ಮದ್ದಲೆಯಲ್ಲಿ ಮಂಜುನಾಥ ಹೆಗಡೆ ಕಂಚಿಮನೆ, ಚಂಡೆಯಲ್ಲಿ ಗಣೇಶ್ ಗಾಂವ್ಕರ್ ಕನಕನಹಳ್ಳಿ ಸಹಕರಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಸರ್ವರೂ ಆಲೆಮನೆ ಹಬ್ಬದ ಸವಿಯನ್ನು ಸವಿಯಲು ಸಂಘಟಕರು ಕೋರಿದ್ದಾರೆ.
ಫೆ.8ಕ್ಕೆ ‘ಆಲೆಮನೆ ಹಬ್ಬ’: ಗಾನ ವೈಭವ ಕಾರ್ಯಕ್ರಮ
