Slide
Slide
Slide
previous arrow
next arrow

ಅ.1ಕ್ಕೆ ಡಿಸಿ ಕಛೇರಿಯಲ್ಲಿ ಧರಣಿ ಸತ್ಯಾಗ್ರಹ

300x250 AD

ಶಿರಸಿ: ಕರ್ನಾಟಕ ನಿವೃತ್ತ ನೌಕರರ ವೇದಿಕೆ ಉತ್ತರ ಕನ್ನಡ ಜಿಲ್ಲೆಯವರು 7 ನೇ ವೇತನ ಆಯೋಗ ಅನುಷ್ಠಾನದಲ್ಲಿ ದಿನಾಂಕ 01-07-2022 ರಿಂದ 31-07-2024 ರ ಅವಧಿಯಲ್ಲಿ ನಿವೃತ್ತರಾದ/ನಿಧನರಾದ ನೌಕರರ ಕುಟುಂಬದವರಿಗೆ ಉಂಟಾದ ಆರ್ಥಿಕ ನಷ್ಟದ ಕುರಿತು ಸರಕಾರದ ಗಮನ ಸೆಳೆಯಲು ಹಿರಿಯ ನಾಗರಿಕರ ದಿನವಾದ ಅ.1 ಮಂಗಳವಾರದಂದು ಕಾರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಪ್ಪು ಪಟ್ಟಿ ಧರಿಸಿ ಧರಣಿ ಸತ್ಯಾಗ್ರಹ ನಡೆಸಲು ನಿವೃತ್ತ ನೌಕರರ ವೇದಿಕೆ ನಿರ್ಧರಿಸಿದ್ದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಆ ದಿನ ಧರಣಿ ಸತ್ಯಾಗ್ರಹ ನಡೆಯಲಿದೆ. ಈ ಮೇಲಿನ ಅವಧಿಯ ನೌಕರರು 01-10-2024 ಮಂಗಳವಾರ ಜಿಲ್ಲಾಧಿಕಾರಿಯ ಕಚೇರಿಯ ಆವರಣದಲ್ಲಿ ಹಾಜರಾಗಲು ವೇದಿಕೆಯ ಜಿಲ್ಲಾ ಸಂಚಾಲಕರಾದ ಬಿ.ಡಿ.ನಾಯ್ಕ, ಉಲ್ಲಾಸ ನಾಯ್ಕ ಸಹ ಸಂಚಾಲಕರಾದ ವಿ.ಎಮ್. ಭಟ್ಟ ವಿನಂತಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top