Slide
Slide
Slide
previous arrow
next arrow

ದೀನದಯಾಳ ಉಪಾಧ್ಯಾಯರ ಜನ್ಮದಿನ:ಕಲ್ಲೇಶ್ವರದಲ್ಲಿ ಸ್ವಚ್ಛತಾ ಕಾರ್ಯ

300x250 AD

ಅಂಕೋಲಾ: ಭಾರತೀಯ ಜನತಾ ಪಾರ್ಟಿ ಹಾಗೂ ರೈತ ಮೋರ್ಚಾ ಅಂಕೋಲಾ ಮಂಡಲ, ಹೆಗ್ಗಾರ್ ಬೂತ್ ವತಿಯಿಂದ ದೀನದಯಾಳ ಉಪಾಧ್ಯಾಯರವರ ಜನ್ಮ ದಿನವನ್ನು ಕಲ್ಲೇಶ್ವರದಲ್ಲಿ ಆಚರಿಸಲಾಯಿತು.

ಕಲ್ಲೇಶ್ವರದಲ್ಲಿ ಇರುವ ಡೊಂಗ್ರಿ ಗ್ರಾಮಪಂಚಾಯತ, ಬ್ಯಾಂಕ್, ಗ್ರಾಮ ಒನ್‌ ಸುತ್ತಮುತ್ತ ಸ್ವಚ್ಛತೆ ಮಾಡಲಾಯಿತು. ಅಲ್ಲಿ ಬಿದ್ದ ಪ್ಲಾಸ್ಟಿಕ್,ಗಾಜುಗಳನ್ನು ಸಂಗ್ರಹಿಸಿ ಸ್ವಚ್ಛಗೊಳಿಸಲಾಯಿತು. ನಂತರ ದೀನದಯಾಳ ಉಪಾಧ್ಯಾಯ ಅವರು ದೇಶಕ್ಕೆ ಮಾಡಿದ ತ್ಯಾಗ ಬಲಿದಾನವನ್ನು ಸ್ಮರಿಸಲಾಯಿತು.

300x250 AD

ಈ ಸಂದರ್ಭದಲ್ಲಿ ಮಂಡಳ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ,  ರೈತ ಮೊರ್ಚಾ ಜಿಲ್ಲಾ ಕಾರ್ಯದರ್ಶಿ ವಿ.ಎಸ್ ಭಟ್ಟ ಕಲ್ಲೇಶ್ವರ, ಹೆಗ್ಗಾರ ಬೂತ್ ಅಧ್ಯಕ್ಷರಾದ ಶೇಖರ ಗಾಂವ್ಕರ,ಯುವ ಮೊರ್ಚಾ ಪ್ರಧಾನ ಕಾರ್ಯದರ್ಶಿ ಶಶಾಂಕ ಹಳವಳ್ಳಿ, ದಯಾನಂದ ವೆರ್ಣೇಕರ, ಯುವಮೊರ್ಚಾ ಉಪಾಧ್ಯಕ್ಷ  ಪ್ರಶಾಂತ ಪಟಗಾರ, ಶ್ರೀಕೃಷ್ಣ ಭಟ್ಟ, ನರಸಿಂಹ ಭಟ್ಟ, ಲೋಕೇಶ್ ನಾಯ್ಕ, ಅಭಿಷೇಕ್ ಹುಲ್ಲಸ್ವಾರ ಮುಂತಾದವರು ಇದ್ದರು.

Share This
300x250 AD
300x250 AD
300x250 AD
Back to top