Slide
Slide
Slide
previous arrow
next arrow

ಚೇತನಾ ಪ್ರಿಂಟಿಂಗ್ ಕೋ-ಆಪರೇಟಿವ್ ಸೊಸೈಟಿಗೆ 3.95ಲಕ್ಷ ರೂ. ಲಾಭ

300x250 AD

ಸೆ.23ಕ್ಕೆ ವಾರ್ಷಿಕ ಸರ್ವಸಾಧಾರಣ ಸಭೆ: ಸನ್ಮಾನ ಕಾರ್ಯಕ್ರಮ

ಶಿರಸಿ : ಉತ್ತರಕನ್ನಡ ಜಿಲ್ಲೆಯ ಸಹಕಾರಿ ರಂಗದಲ್ಲಿ ಮುದ್ರಣ ಕಾರ್ಯದೊಂದಿಗೆ ಗಮನಸೆಳೆದ ಇಲ್ಲಿಯ ದಿ ಚೇತನಾ ಪ್ರಿಂಟಿಂಗ್ ಆ್ಯಂಡ್ ಪಬ್ಲಿಷಿಂಗ್ ಕೋ-ಆಪ್ ಸೊಸೈಟಿ ಲಿ., ಇದರ 26ನೇ ವಾರ್ಷಿಕ ಸರ್ವಸಾಧಾರಣ ಸಭೆ ಹಾಗೂ ಸಂಮಾನ ಕಾರ್ಯಕ್ರಮವು ಸೆ.23ರ ಸೋಮವಾರ ಮಧ್ಯಾಹ್ನ 3.30ಕ್ಕೆ ಶಿರಸಿಯ ಟಿ.ಎಮ್.ಎಸ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಜಿ. ಎಂ. ಹೆಗಡೆ ಹುಳಗೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಹಕಾರಿ ರಂಗದ ಆಶೋತ್ತರಗಳನ್ನು ಹೊಂದಿ 1988ರಲ್ಲಿ ಸ್ಥಾಪನೆಗೊಂಡ ಚೇತನಾ ಸಹಕಾರಿ ಮುದ್ರಣಾಲಯವು ಆರಂಭದಲ್ಲಿ ತೀರ ಕಷ್ಟದ ದಿನಗಳನ್ನು ಕಳೆದಿದೆ. ಲಕ್ಷಕ್ಕೂ ಅಧಿಕ ಮೊತ್ತದ ಸಾಲವನ್ನು ಹೊಂದಿದ್ದಲ್ಲದೇ, ನಷ್ಟದ ಹಾದಿಯಲ್ಲಿಯೂ ಸಂಸ್ಥೆ ಸಾಗಿತ್ತು. ಕಾಲಕ್ರಮೇಣ ತನ್ನ ಕಾರ್ಯಕ್ಷಮತೆ ಹಾಗೂ ಬದ್ಧತೆಯೊಂದಿಗೆ ಮುದ್ರಣ ಕಾರ್ಯದಲ್ಲಿ ಜನಸಾಮಾನ್ಯರ ನಂಬಿಕೆಗೆ ಪಾತ್ರವಾದ ಸಂಸ್ಥೆಯು 1996 ರಿಂದ ಸತತ ಲಾಭದಲ್ಲಿ ಮುಂದುವರಿಯುತ್ತಲಿದೆ.
ಕೇವಲ ಶಿರಸಿ, ಸಿದ್ದಾಪುರ, ಯಲ್ಲಾಪುರ ಮಾತ್ರವಲ್ಲದೇ ಜಿಲ್ಲೆಯ ವಿವಿಧೆಡೆಯಿಂದ ಪ್ರಾಥಮಿಕ ಪತ್ತಿನ ಸಹಕಾರಿ ಸಂಸ್ಥೆಗಳು,ಸೌಹಾರ್ದ ಬ್ಯಾಂಕ್‌ಗಳು, ಶಾಲಾ-ಕಾಲೇಜುಗಳು, ಆಸ್ಪತ್ರೆಗಳು, ಸಹಕಾರಿ ಅಭಿಮಾನಿಗಳು ಹೆಚ್ಚಾಗಿ ಮುದ್ರಣ ಕಾರ್ಯವನ್ನು ನೀಡುತ್ತಿದ್ದಾರೆ. ಸಹಕಾರಿ ಕಾಯ್ದೆ ಕಾನೂನಿಡಿಯಲ್ಲಿ ಸಹಕಾರಿ ಮನೋಭಾವನೆಯಿಂದ ಕಡಿಮೆ ವೆಚ್ಚದೊಂದಿಗೆ, ಸ್ಪರ್ಧಾತ್ಮಕ ದರದಲ್ಲಿ ಮುದ್ರಣ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರೈಕೆ ಮಾಡುತ್ತಿರುವ ಬದ್ಧತೆಯಿಂದಲೇ ಚೇತನಾ ಸಹಕಾರಿ ಮುದ್ರಣಾಲಯ ಜನಸಾಮಾನ್ಯರಿಗೆ ತೀರ ಹತ್ತಿರವಾಗಿದೆ ಎಂದಿದ್ದಾರೆ.

ಆರಂಭದಲ್ಲಿ ಸಾಲದ ಹೊರೆಯಲ್ಲಿದ್ದ ಸಂಘವು ಇದೀಗ ಲಾಭದ ಹಾದಿಯಲ್ಲಿ ಸಾಗುತ್ತಿದ್ದು 13 ಮಂದಿ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸ್ಥಳಿಯರಿಗೆ ಹೆಚ್ಚಿನ ಉದ್ಯೋಗ ಕಲ್ಪಿಸುವ ನಿರೀಕ್ಷೆಯಲ್ಲಿದ್ದೇವೆ. ಶೇರು ಸದಸ್ಯರುಗಳಿಗೆ ಈಗಾಗಲೆ ವಾರ್ಷಿಕ ವರದಿ ಹಾಗೂ ಅಢಾವೆ ಪತ್ರಿಕೆಗಳನ್ನು ಕಳಿಸಲಾಗಿದ್ದು, ಬಾರದೇ ಇರುವವರು ಇದನ್ನೇ ಆಮಂತ್ರಣವೆಂದು ತಿಳಿದು ಸಭೆಗೆ ಹಾಜರಾಗಿ ತಮ್ಮ ಸಲಹೆ, ಸೂಚನೆ ನೀಡುವಂತೆ ಪ್ರಕಟಣೆ ತಿಳಿಸಿದೆ.

ಸಂಘದ ಆರ್ಥಿಕ ಸ್ಥಿತಿಗತಿ:

300x250 AD

2023-24 ನೇ ಸಾಲಿನಲ್ಲಿ ಸಂಘವು 3,95,878.40 ರೂ. ನಿವ್ವಳ ಲಾಭಗಳಿಸಿದೆ. ಒಟ್ಟೂ 308 ಶೇರು ಸದಸ್ಯರನ್ನು ಹೊಂದಿರುವ ಸಂಸ್ಥೆಯಲ್ಲಿ 2.45 ಲಕ್ಷ ರೂ ಶೇರು ಬಂಡವಾಳ, ಒಟ್ಟೂ ನಿಧಿಗಳು 144.42 ಲಕ್ಷ ಇದ್ದು, 51.82 ಲಕ್ಷ ರೂ ಗುಂತಾವಣೆಯಿದೆ. ಶೇರು ಸದಸ್ಯರ ಹಾಗೂ ಸಂಘದ ಮೇಲಿನ ಅಭಿಮಾನದಿಂದ ಮುದ್ರಣ ಕಾರ್ಯವನ್ನು ನೀಡುತ್ತಾ ಬಂದಿರುವ ಗ್ರಾಹಕರೆಲ್ಲರ ಸಹಕಾರದಿಂದ ಈ ಬಾರಿ ಒಟ್ಟೂ 1.23 ಕೋಟಿಗೂ ಅಧಿಕ ಮುದ್ರಣ ಕಾರ್ಯವನ್ನು ಮಾಡಲಾಗಿದೆ.


ಸಂಮಾನ ಕಾರ್ಯಕ್ರಮ:

ಸಂಘದಲ್ಲಿ 34 ವರ್ಷಗಳಿಂದ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಭಾಕರ ವಿ. ಹೆಗಡೆ ಕಂಪ್ಲಿ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಗುತ್ತಿದೆ. ಆನಂತರ ಸಂಘದ ಏಳ್ಗೆಗಾಗಿ ಅವಿರತವಾಗಿ ಶ್ರಮಿಸಿದ ಎಸ್. ಪಿ. ಶೆಟ್ಟಿ ಹಾಗೂ ಟಿ.ಎಮ್.ಎಸ್ ಶಿರಸಿಯ ಮುಖ್ಯ ಕಾರ್ಯನಿರ್ವಾಹಕರಾಗಿ ನಿವೃತ್ತಿಗೊಂಡ ಎಮ್. ಎ. ಹೆಗಡೆ ಕಾನಮುಸ್ಕಿ ಇವರನ್ನು ಸಂಘದ ವತಿಯಿಂದ ಅಭಿನಂದಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

Share This
300x250 AD
300x250 AD
300x250 AD
Back to top