Slide
Slide
Slide
previous arrow
next arrow

ಅಮದಳ್ಳಿಯಲ್ಲಿ ಬಿಜೆಪಿ ಸದಸ್ಯತಾ ಅಭಿಯಾನ: ರೂಪಾಲಿ ನಾಯ್ಕ್ ಭಾಗಿ

300x250 AD

ಅಭಿವೃದ್ಧಿ ಮಂತ್ರ ಪಠಿಸುವ ರೂಪಾಲಿ ನಾಯ್ಕ್‌ಗೆ ಜನಸೇವೆಯ ಅವಕಾಶ ಮತ್ತೆ ಸಿಗಲಿ: ಪ್ರಭಾಕರ್ ಕಲ್ಮನೆ

ಕಾರವಾರ: ತಾಲೂಕಿನ ಅಮದಳ್ಳಿಯ ಮಹಾದೇವ ವಾಡೆಯ ಗಾಂವಕಾರ್ ವಾಡದ ಸುಧೀರ್ ಗಾಂವಕರ್ ಮನೆಯ ಆವರಣದಲ್ಲಿ ನಿವೃತ್ತ ಕಂದಾಯ ಅಧಿಕಾರಿ ಪ್ರಭಾಕರ ಕಲ್ಮನೆ ಅವರ ನೇತೃತ್ವದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಹಾಗೂ ಕರ್ನಾಟಕ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ನಡೆಸಿದರು.

ನಿವೃತ್ತ ಕಂದಾಯ ಇಲಾಖೆಯ ನಿರೀಕ್ಷಕರಾದ ಪ್ರಭಾಕರ ಕಲ್ಮನೆ ಅವರು ಬಿಜೆಪಿಯ ಕಟ್ಟಾಳಾಗಿದ್ದು ದೇಶದ ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಯಾಗಿದ್ದಾರೆ‌‌. ಹಿರಿಯ ನಾಗರಿಕರಾಗಿರುವ ಪ್ರಭಾಕರ ಕಲ್ಮನೆ ಅವರ ದೇಶಭಕ್ತಿ ಮಾರ್ಗದರ್ಶನ ನಮ್ಮೆಲ್ಲರಿಗೂ ಪ್ರೇರಣೆ. ಇವರ ನೇತೃತ್ವದಲ್ಲಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವವನ್ನು ಇನ್ನಷ್ಟು ಬಲಿಷ್ಠಗೊಳಿಸೋಣ ಎಂದು ರೂಪಾಲಿ ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಭಾಕರ ಕಲ್ಮನೆ ನಮ್ಮ ಕರೆಗೆ ಓಗೊಟ್ಟು ಮನೆಗೆ ಬಂದ ರೂಪಾಲಿ ನಾಯ್ಕರಿಗೆ ಕೃತಜ್ಞತೆ ಸಲ್ಲಿಸಿ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆದು ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿದಕ್ಕೆ ಧನ್ಯವಾದಗಳನ್ನು ತಿಳಿಸಿದರು. ದೇಶದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಪಕ್ಷವನ್ನು ದಿನದಿಂದ ಹೆಚ್ಚೆಚ್ಚು ಬಲಿಷ್ಠಗೊಳ್ಳುತ್ತಿದೆ. ಮಾತ್ರವಲ್ಲದೇ ಭಾರತ ದೇಶವನ್ನು ಪ್ರಪಂಚದಾದ್ಯಂತ ಗುರುತಿಸುವಂತೆ ಅಭಿವೃದ್ಧಿಯ ಪಥದ ಮುನ್ನಡೆಯುತ್ತಿದ್ದಾರೆ. ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಬಿಜೆಪಿಯ ಕಾರ್ಯಕರ್ತರಾಗಿರುವುದು ನಮ್ಮ ಹೆಮ್ಮೆ ಎಂದು ಹೇಳಿದರು.

300x250 AD

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜನರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಂಡರು. ಅಮದಳ್ಳಿ ಗ್ರಾ.ಪಂ ಉಪಾಧ್ಯಕ್ಷರು, ಬಿಜೆಪಿ ಮಂಡಲಾಧ್ಯಕ್ಷ ಸುಭಾಷ ಗುನಗಿ, ಗಣಪತಿ ಗುನಗಾ, ಉದಯ ನಾಯ್ಕ, ವಿಲಾಸ ಕಲ್ಮನೆ, ದಿಗಂಬರ ನಾಯ್ಕ, ವಿಠೋಬ ಶೆಟ್ಟಿ, ವಸಂತ ಗಾಂವಕರ್ ಹಾಗೂ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಾಘು ಗಾಂವಕರ್ ಕಾರ್ಯಕ್ರಮದ ಆಯೋಜನೆಗೆ ಸಹಕರಿಸಿದರು.

*****
Box
ಮಾಜಿ ಶಾಸಕರು, ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ರೂಪಾಲಿ ನಾಯ್ಕರು ನಮ್ಮ ಕರೆಗೆ ಓಗೊಟ್ಟು ನಮ್ಮ ವಾಡೆಗೆ ಬಂದು ಪ್ರಧಾನಿ ಮೋದಿಯವರ ಆಶಯದಂತೆ ಬಿಜೆಪಿಯ ಮಹತ್ವದ ಸದಸ್ಯತ್ವ ಅಭಿಯಾನವನ್ನು ನಡೆಸಿರುವುದು ನಮ್ಮೆಲ್ಲ ಕಾರ್ಯಕರ್ತರಿಗೆ ಖುಷಿ ತಂದಿದೆ. ಸದಾ ಅಭಿವೃದ್ಧಿ ಮಂತ್ರ ಪಠಿಸುವ ರೂಪಾಲಿ ನಾಯ್ಕರಿಗೆ ಮತ್ತೆ ಜನಸೇವೆ ಮಾಡುವ ಅವಕಾಶ ಲಭಿಸಲಿ ಎಂದು ಪ್ರಭು ಶ್ರೀರಾಮಚಂದ್ರನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ.
ಪ್ರಭಾಕರ ಕಲ್ಮನೆ ಅಮದಳ್ಳಿ
ಮೊ: 9844470940

Share This
300x250 AD
300x250 AD
300x250 AD
Back to top