Slide
Slide
Slide
previous arrow
next arrow

ಬಾಳಿಗಾದಲ್ಲಿ ನಿಕಟಪೂರ್ವ ಸೇವಾ ತರಬೇತಿ ಶಿಬಿರ

300x250 AD

ಕುಮಟಾ: ಇಲ್ಲಿನ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಿಕಟಪೂರ್ವ ಸೇವಾ ತರಬೇತಿ ಶಿಬಿರದ ಭಾಗವಾಗಿ ವಿಶೇಷ ಉಪನ್ಯಾಸಕರಾಗಿ ಕುಮಟಾ ತಾಲೂಕಿನ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಆರ್.ಎಲ್.ಭಟ್ ಆಗಮಿಸಿದ್ದರು. ಕ್ಷೇತ್ರಶಿಕ್ಷಣಾಧಿಕಾರಿಗಳ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಜವಾಬ್ದಾರಿಗಳನ್ನು, ಇನ್ನಿತರ ಕಾರ್ಯಗಳನ್ನು ಉದಾಹರಣೆಗಳ ಮೂಲಕ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯರಾದ ಡಾ. ಪ್ರೀತಿ ಪಿ. ಭಂಡಾರಕರರವರು ಎರಡು ವರ್ಷದ ಬಿ.ಇಡಿ. ಪಠ್ಯದಲ್ಲಿ ನಿಕಟ ಪೂರ್ವ ಸೇವಾತರಬೇತಿಯಿಂದ ವಿದ್ಯಾರ್ಥಿಗಳಲ್ಲಿ ಶಾಲಾ ನಿರ್ವಹಣಾ ಕೌಶಲ್ಯ ಬೆಳವಣಿಗೆಯಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುಮಾರಿ ರಶ್ಮಿ ಪಟಗಾರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕರಾದ ಸುಬ್ರಹ್ಮಣ್ಯ ಕೆ. ಭಟ್ ವಿಶೇಷ ಉಪನ್ಯಾಸಕರನ್ನು ಸಭೆಗೆ ಪರಿಚಯಿಸಿದರು. ಕುಮಾರ. ಮಹೇಶ ಕಲ್ಯಾಣಕರ ವಂದಿಸಿದರು ಮತ್ತು ಕುಮಾರಿ. ವಿ. ಅನ್ವಿತಾ ಕಾರ್ಯಕ್ರಮ ನಿರ್ವಹಿಸಿದರು

300x250 AD
Share This
300x250 AD
300x250 AD
300x250 AD
Back to top