Slide
Slide
Slide
previous arrow
next arrow

ಜಿಲ್ಲಾ ಕಾಂಗ್ರೇಸ್ ಸಂಘಟನಾ ಕಾರ್ಯದರ್ಶಿಯಾಗಿ ಕಲಕರಡಿಯ ಗಣಪತಿ ನಾಯ್ಕ

300x250 AD

ಶಿರಸಿ : ಜಿಲ್ಲಾ ಕಾಂಗ್ರೇಸ್ ಸಮಿತಿಯ ಇಂಟೆಕ್ ವಿಭಾಗದ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ತಾಲೂಕಿನ ಕಲಕರಡಿಯ ಗಣಪತಿ ಬಸವಣ್ಯಪ್ಪ ನಾಯ್ಕ ಹಾಗೂ ಮುಂಡಗೋಡ ತಾಲೂಕಾ ಇಂಟೆಕ ಸಮಿತಿಯ ಬ್ಲಾಕ್ ಅಧ್ಯಕ್ಷರನ್ನಾಗಿ ಮುಂಡಗೋಡ ತಾಲೂಕಿನ ಕಾತೂರಿನ ಅಜ್ಜಪ್ಪ ಮಲೇಶಪ್ಪ ಬಾಗಿಲದವರ ಆಯ್ಕೆಯಾಗಿದ್ದಾರೆ.

ಅವರುಗಳನ್ನು ಕಾಂಗ್ರೇಸ್ ಪಕ್ಷದ ಸಂಘಟನೆ ಮತ್ತು ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವುದನ್ನು ಗಮನಿಸಿ ಎ.ಐ.ಸಿ.ಸಿ. ಕಾರ್ಯದರ್ಶಿ, ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳಕರ ರವರ ಸೂಚನೆ ಮೇರೆಗೆ ಇವರುಗಳನ್ನು ಕರ್ನಾಟಕ ಪ್ರದೇಶ ಕಾಂಗ್ರೇಸ ಸಮಿತಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ ರವರ ಮತ್ತು ಇಂಟೆಕ್ ಕಾಂಗ್ರೇಸ ಸಮಿತಿಯ ರಾಜ್ಯಾಧ್ಯಕ್ಷ ಲಕ್ಷ್ಮಿವೆಂಕಟೇಶ ರವರ ಆದೇಶದಂತೆ ಜಿಲ್ಲಾ ಕಾಂಗ್ರೇಸ ಸಮಿತಿಯ ಇಂಟೆಕ್ ವಿಭಾಗದ ಜಿಲ್ಲಾಧ್ಯಕ್ಷ ಪ್ರೋ. ಎಂ.ಟಿ.ನಾಯ್ಕ ಅವರು ನೇಮಕ ಮಾಡಿರುತ್ತಾರೆ ಎಂದು ಜಿಲ್ಲಾ ಕಾಂಗ್ರೇಸ ಸಮಿತಿಯ ಇಂಟೆಕ್ ವಿಭಾಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾಂಡುರಂಗ ವಿ. ಪಾಟೀಲ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿರಸಿಯ ಸುಪ್ರಿಯಾ ಹೊಟೇಲ್ ಸಭಾಂಗಣದಲ್ಲಿ ನೇಮಕಾತಿ ಆದೇಶ ಪತ್ರವನ್ನು ನೀಡಿ ಇವರುಗಳಿಗೆ ತಾಲೂಕಿನ ಬನವಾಸಿ ಮತ್ತು ಮುಂಡಗೋಡ ಬ್ಲಾಕ್ ಇಂಟೆಕ್ ಸಮಿತಿಗಳನ್ನು ಕೂಡಲೇ ರಚಿಸುವ ಉಸ್ತುವಾರಿಯನ್ನು ನೀಡಿದ್ದರು. ಈ ಸಂದರ್ಭದಲ್ಲಿ ಶಿರಸಿ ಬ್ಲಾಕ ಇಂಟೆಕ್ ಸಮಿತಿ ಅಧ್ಯಕ್ಷ ನಾರಾಯಣ ನಾಯ್ಕ, ಗುಡ್ನಾಕರ ಪುಟ್ಟಪ್ಪ ನಾಯ್ಕ ಮುಂತಾದ ಕಾಂಗ್ರೇಸ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top