Slide
Slide
Slide
previous arrow
next arrow

‘ದೇವರು ಪ್ರತಿಯೊಬ್ಬರಿಗೂ ಅವಕಾಶ ನೀಡುತ್ತಾನೆ, ಅದನ್ನು ಸದುಪಯೋಗಪಡಿಸಿಕೊಳ್ಳಿ’

300x250 AD

ಸಿದ್ದಾಪುರ : ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ  ಕ್ರೀಡಾಕೂಟ ಹಲಗೇರಿ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು. 

ಕ್ರೀಡಾಕೂಟಕ್ಕೆ ಹಲಗೇರಿ ಗ್ರಾಮ ಪಂಚಾಯತ ಅಧ್ಯಕ್ಷೆ ಮೋಹಿನಿ ಅಣ್ಣಪ್ಪ ನಾಯ್ಕ ಉದ್ಘಾಟಿಸಿ ಚಾಲನೆ ನೀಡಿದರು. ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ದೇವರು ಪ್ರತಿಯೊಬ್ಬರಿಗೆ ಅವಕಾಶವನ್ನು ನೀಡುತ್ತಾನೆ ಅದನ್ನು ಸದುಪಯೋಗಪಡಿಸಿಕೊಂಡು ಉತ್ತಮ  ಜೀವನವನ್ನು ರೂಪಿಸಿಕೊಳ್ಳಬೇಕು ಸಮಾಜದಲ್ಲಿ ಗೌರವಯುತರಾಗಿ ಬಾಳಬೇಕು, 6 ರಿಂದ 25 ವರ್ಷದ ತನಕ ವಿದ್ಯಾಭ್ಯಾಸ ನಡೆಸಲು ಅವಕಾಶವಿರುತ್ತದೆ ಈ ಸಂದರ್ಭದಲ್ಲಿ ಶಿಕ್ಷಣದ ಜೊತೆಗೆ  ನಮಗಿಷ್ಟವಾದ ಕ್ರೀಡೆ ಕಲೆಯಲ್ಲಿ ಭಾಗವಹಿಸಿ ಸಾಧನೆಯನ್ನ ಮಾಡಬೇಕು ಎಂದರು. 

300x250 AD

ಹಲಗೇರಿ ಪಿಯು ಕಾಲೇಜು ಪ್ರಾಚಾರ್ಯರು,ಎಸ್ ಡಿ ಎಂ ಸಿ  ಉಪಾಧ್ಯಕ್ಷ ಸಂತೋಷ ನಾಯ್ಕ, ,ಮಂಜಪ್ಪ ಎಂ .ಜಿ ಮುಂತಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top