Slide
Slide
Slide
previous arrow
next arrow

ಆ.6ಕ್ಕೆ ಕೃಷಿ ಸಂವಾದ

300x250 AD

ಶಿರಸಿ: ಹುಳಗೋಳ ಪ್ರಾಥಮಿಕ ಕೃಷಿ ಸಹಕಾರಿ ಸಂಘದಿಂದ ಅಡಿಕೆ, ಕಾಳುಮೆಣಸು ಮತ್ತು ಕಾಫಿ ಕೊಳೆ ರೋಗ ನಿಯಂತ್ರಣ ಮತ್ತು ಪೋಷಕಾಂಶ ನಿರ್ವಹಣೆ ಕುರಿತು ಕೃಷಿ ಸಂವಾದ ಕಾರ್ಯಕ್ರಮವನ್ನು ಆ.6,‌ಮಂಗಳವಾರದಂದು ಬೆಳಿಗ್ಗೆ 10ಗಂಟೆಗೆ  ಭೈರುಂಬೆಯ ಹುಳಗೋಳ ಪ್ರಾಥಮಿಕ ಕೃಷಿ ಸಹಕಾರಿ ಸಂಘದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ.ಎಸ್. ಹೆಗಡೆ ಕೆಶಿನ್ಮನೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಟಿಎಂಎಸ್ ನಿರ್ದೇಶಕ ಜಿ.ಎಂ. ಹೆಗಡೆ ಹುಳಗೋಳ ಆಗಮಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಸಸ್ಯರೋಗ ಸಂರಕ್ಷಣಾ ವಿಭಾಗ ಮುಖ್ಯಸ್ಥ ಡಾ. ವಿನಾಯಕ ಹೆಗಡೆ ಆಗಮಿಸಲಿದ್ದು, ಕೃಷಿ ತಜ್ಞ ಕೆ.ಎಂ. ಹೆಗಡೆ ಬೈರುಂಬೆ ಉಪಸ್ಥಿತರಿರಲಿದ್ದಾರೆ. ಈಗಾಗಲೇ ಕೊಳೆ ಬಂದಲ್ಲಿ ನಿರ್ವಹಿಸಬೇಕಾದ ತುರ್ತು ಕ್ರಮ, ಕೊಳೆ ಬರದಂತೆ ಕಾಯ್ದುಕೊಳ್ಳುವುದು, ಅತಿ ಹೆಚ್ಚು ಮಳೆಯಾಗಿರುವುದರಿಂದ ನಿರ್ವಹಿಸಬೇಕಾದ ಗೊಬ್ಬರ ಮತ್ತು ಪೋಷಕಾಂಶಗಳ ಕುರಿತು ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದ್ದು ಸದಸ್ಯರು ಪ್ರಯೋಜನ ಪಡೆದುಕೊಳ್ಳಲು ಸಂಘಟಕರು ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top