Slide
Slide
Slide
previous arrow
next arrow

ಕೇಂದ್ರ ಬಜೆಟ್: ಲಯನ್ಸ ಪಿ.ಯು. ಕಾಲೇಜಿನಲ್ಲಿ ಉಪನ್ಯಾಸ

300x250 AD

ಶಿರಸಿ: ಡಾ. ಭಾಸ್ಕರ ಸ್ವಾದಿ ಮೆಮೊರಿಯಲ್ ಲಯನ್ಸ್ ಪಿ.ಯು.ಕಾಲೇಜಿನ ವಾಣಿಜ್ಯ ವಿಭಾಗದ ಮೂಲಕ ಕೇಂದ್ರ ಬಜೆಟ್ 2024ರ ಕುರಿತು ಅರ್ಥಪೂರ್ಣ ಉಪನ್ಯಾಸ ಹಾಗೂ ಚರ್ಚಾ ಕಾರ್ಯಕ್ರಮ ನೆರವೇರಿತು. ವಿಶೇಷ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಉಪನ್ಯಾಸಕರಾದ ಎಸ್.ಪಿ.ಪಾಟೀಲ 2024ರ ಕೇಂದ್ರ ಬಜೆಟ್ ಮುಖ್ಯಾಂಶಗಳ ಕುರಿತು ವಿಷಯಗಳನ್ನು ತಿಳಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಬಜೆಟ್ ತಯಾರಿಕೆ ಹೇಗಾಗುತ್ತದೆ, ಈ ಸಾರಿಯ ಬಜೆಟ್ ಮುಖ್ಯಾಂಶಗಳೇನು, ಬಜೆಟ್ ಬೀರುವ ಪರಿಣಾಮಗಳೇನು ಎಂಬುದರ ಕುರಿತು ಚರ್ಚೆ ನಡೆಯಿತು. ಬಜೆಟ್ ಮಂಡನೆಯ ದಿನವೇ ಅತ್ಯಂತ ಅರ್ಥಪೂರ್ಣವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಲೇಜಿನ ಪ್ರಾಂಶುಪಾಲರಾದ ಶಶಾಂಕ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ.ರವಿ ಹೆಗಡೆ ನೇತೃತ್ವದಲ್ಲಿ ವಾಣಿಜ್ಯ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ವಿದ್ಯಾರ್ಥಿನಿ ಕು.ಸೌಖ್ಯ ಹೆಗಡೆ ಎಲ್ಲರನ್ನೂ ಸ್ವಾಗತಿಸಿದರೆ, ಕು.ಐಶ್ವರ್ಯ ಶೆಟ್ಟಿ ವಂದನಾರ್ಪಣೆಗೈದರು.

300x250 AD
Share This
300x250 AD
300x250 AD
300x250 AD
Back to top