Slide
Slide
Slide
previous arrow
next arrow

ಜಿ.ಸು.ಬಕ್ಕಳರಿಗೆ ಕಾಸರಗೋಡು ಕನ್ನಡ ಪತ್ರಕರ್ತರ ಸಂಘದ ಪ್ರಶಸ್ತಿ ಪ್ರದಾನ

300x250 AD

ಶಿರಸಿ: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘ ಕೊಡ ಮಾಡುವ ದತ್ತಿನಿಧಿ ಪ್ರಶಸ್ತಿಯನ್ನು ಉತ್ತರಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ, ಸಾಹಿತಿ, ಗಝಲ್ ಕವಿ ಜಿ.ಸುಬ್ರಾಯ ಭಟ್ ಬಕ್ಕಳರಿಗೆ ಪ್ರದಾನ ಮಾಡಲಾಯಿತು.

ಕ್ರಿಯಾಶೀಲ ಸಂಘ ಉದ್ಯಮಿ ದುಬೈ ಉದ್ಯಮಿ ಜೊಸೆಫ್ ಮಾಥಿಯಾಸ್  ನೀಡುವ ದತ್ತಿನಿಧಿ ಪ್ರಶಸ್ತಿಯನ್ನು‌ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ,  ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಮಂಜೇಶ್ವರ ಶಾಸಕ ಅಶ್ರಫ್, ನ್ಯಾಯವಾದಿ ಕುಂಞಂಬು , ಎಕೆಎಂ ಅಶ್ರಫ್ ,ಸಂಘದ ಅಧ್ಯಕ್ಷ ರವಿ ನಾಯ್ಕಾಪು ಸೇರಿ ಹಲವರು ಪ್ರಶಸ್ತಿ ಪ್ರದಾನ ಮಾಡಿದರು.  
ಸುಬ್ರಾಯ ಭಟ್ ಬಕ್ಕಳರ ಪತ್ರಿಕೋದ್ಯಮ ಸೇವೆಗಾಗಿ ಕೆ. ಶಾಮರಾವ್ ಪ್ರಶಸ್ತಿ , ಡಿವಿಜಿ ಪುರಸ್ಕಾರ,  ಗಜಲ್ ಸಾಹಿತ್ಯಕ್ಕೆ ಕುವೆಂಪು ಸಾಹಿತ್ಯ ಪುರಸ್ಕಾರ, ಕೌಸ್ತುಭ ಶ್ರೀ ಪ್ರಶಸ್ತಿಗೆ  ಈಗಾಗಲೇ ಭಾಜನರಾಗಿದ್ದರು ಎಂಬುದೂ ಉಲ್ಲೇಖನೀಯ.

300x250 AD
Share This
300x250 AD
300x250 AD
300x250 AD
Back to top