Slide
Slide
Slide
previous arrow
next arrow

ಮರುಡಾಂಬರೀಕರಣ ಕಾಮಗಾರಿಗೆ ಚಾಲನೆ

300x250 AD

ಸಿದ್ದಾಪುರ: ತಾಳಗುಪ್ಪಾ-ಖಾನಾಪುರ ರಾಜ್ಯ ಹೆದ್ದಾರಿಯ ಚೂರಿಕಟ್ಟೆ ಕ್ರಾಸ್‌ನಿಂದ ಕುಣಜಿ ಆಂಜನೇಯ ದೇವಾಲಯದವರೆಗೆ ಮರು ಡಾಂಬರೀಕರಣ ಹಾಗೂ ತಿರುವು ಸುಧಾರಣೆ ಕಾಮಗಾರಿಗೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಸೋಮವಾರ ಭೂಮಿಪೂಜೆ ನೆರವೇರಿಸಿದರು.

ತಾಲೂಕಿನ ಕಾವಂಚೂರಿನಲ್ಲಿ ಶಿಲಾನ್ಯಾಸ ನೆರವೇರಿಸಿ ಗುಣಮಟ್ಟದೊಂದಿಗೆ ಕಾಮಗಾರಿಯನ್ನು ಸರಿಯಾದ ಸಮಯಕ್ಕೆ ಮುಗಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಕಾವಂಚೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿಶಾಲಾಕ್ಷಿ ಮಡಿವಾಳ, ಉಪಾಧ್ಯಕ್ಷೆ ವಿನೋದಾ ಹರಿಜನ, ಸದಸ್ಯರಾದ ಚಂದ್ರಕಾಂತ ನಾಯ್ಕ, ಫಯಾಜ್ ಖಾನ್, ಪಕೀರಾ ಭೋವಿ, ರಾಜು ಕಟ್ಟೆಮನೆ, ಬೊಮ್ಮ ಗೊಂಡ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top