Slide
Slide
Slide
previous arrow
next arrow

ಬೈಕ್ ಕದ್ದ ಕಳ್ಳ ಪೋಲಿಸ್ ಬಲೆಗೆ

300x250 AD

ಯಲ್ಲಾಪುರ: ತಾಲೂಕಿನ ಉಚಗೇರಿಯ ಮಜ್ಜಿಗೆಹಳ್ಳದಲ್ಲಿ ಬೈಕ್ ಕಳವು ಮಾಡಿದ ವ್ಯಕ್ತಿಯನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.

ಜಡಗಿನಕೊಪ್ಪದ ಫಿಲೀಪ್ ಕೃಷ್ಣ ಸಿದ್ದಿ ಬಂಧಿತ ವ್ಯಕ್ತಿ. ಈತ ಉಚಗೇರಿ ಮಜ್ಜಿಗೆಹಳ್ಳದ ಲಕ್ಷ್ಮಣ ಕಾಳು ದೊಯಿಪಡೆ ಅವರು ಮನೆಯ ಮುಂದೆ ನಿಲ್ಲಿಸಿದ್ದ ಬೈಕನ್ನು ಕಳೆದ ಮಾ.1 ರಂದು ಕಳವು ಮಾಡಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಬೇರೆ ಬೇರೆ ಕಡೆಗಳಲ್ಲಿ ಕಳವು ಮೂರು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ದರೋಡೆ, ಅಡಕೆ ಕಳವು, ಬೈಕ್ ಕಳ್ಳತನ, ಪೊಕ್ಸೊ ಸೇರಿದಂತೆ 10 ಕ್ಕೂ ಹೆಚ್ಚು ಪ್ರಕರಣಗಳು ಈತನ ಮೇಲಿದ್ದು, ಮುಂಡಗೋಡ ತಾಲೂಕು ವ್ಯಾಪ್ತಿಯಲ್ಲೂ ಬೈಕ್ ಕಳವು ಮಾಡಿರುವ ವಿಚಾರ ತನಿಖೆಯ ವೇಳೆ ತಿಳಿದು ಬಂದಿದೆ.

300x250 AD
Share This
300x250 AD
300x250 AD
300x250 AD
Back to top