Slide
Slide
Slide
previous arrow
next arrow

ಗಟಾರದಲ್ಲಿ ಬಿದ್ದ ಎಮ್ಮೆ ರಕ್ಷಣೆ

300x250 AD

ದಾಂಡೇಲಿ : ನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಹತ್ತಿರದಲ್ಲಿ ಇರುವ ಗಟಾರದಲ್ಲಿ ಬಿದ್ದು ಮೇಲೆ ಬರಲಾಗದೆ ಒದ್ದಾಡುತ್ತಿದ್ದ ಎಮ್ಮೆಯನ್ನು ರಕ್ಷಿಸುವ‌ ನಿಟ್ಟಿನಲ್ಲಿ ಗೋಪ್ರೇಮಿಗಳಾದ ಜೈರಾಮ್ ಪ್ರಭು, ಅಭಿಷೇಕ್ ಬೆಳ್ಳಿಗಟ್ಟಿ, ಸಂದೀಪ್ ಶಿರೋಡ್ಕರ್, ಮಣಿಕಂಠ ನೀರಲಗಿಮಠ, ಗೌತಮ್ ಪಾಟೀಲ್, ಭೀಮುಶಿ ಬಾದುಲಿ, ಶಿವಶರಣ್ ಸಗನೂರು ಅವರ ತಂಡ ಸ್ಥಳಕ್ಕೆ ಭೇಟಿ ನೀಡಿ ಸುರಕ್ಷಿತವಾಗಿ ಎಮ್ಮೆಯನ್ನು ಗಟಾರದಿಂದ ಮೇಲಕ್ಕೆತ್ತಿ, ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ.

ಯಾವುದೇ ಸ್ವಾರ್ಥವಿಲ್ಲದೆ, ನಿಸ್ವಾರ್ಥ ಮನಸ್ಸಿನಿಂದ ಎಮ್ಮೆಗೆ ಜೀವದ ಉಸಿರನ್ನು ನೀಡಿದ ಗೋ ಪ್ರೇಮಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

300x250 AD
Share This
300x250 AD
300x250 AD
300x250 AD
Back to top