Slide
Slide
Slide
previous arrow
next arrow

ಆಕಸ್ಮಿಕವಾಗಿ ನೀರಿಗೆ ಬಿದ್ದ ಮೀನುಗಾರನ ರಕ್ಷಣೆ: ಆಸ್ಪತ್ರೆಗೆ ದಾಖಲು

300x250 AD

ಭಟ್ಕಳ : ಅಳ್ವೆಕೋಡಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟವೊಂದರಿಂದ ಮೀನುಗಾರನೊರ್ವ ನಿಯಂತ್ರಣ ತಪ್ಪಿ ನೀರಿಗೆ ಬಿದ್ದಿರುವ ಘಟನೆ ಬುಧವಾರ ಸಂಜೆ ನಡೆದಿದೆ.

ಮೀನುಗಾರನನ್ನು ಗಿರೀಶ ಪರಮಯ್ಯ ದೇವಾಡಿಗ ಶಿರಾಲಿ ಮಾವಿನಕಟ್ಟೆ ಹೆದ್ದಾರಿ ಮನೆ ನಿವಾಸಿ ಎಂದು ತಿಳಿದು ಬಂದಿದೆ. ಬುಧವಾರದಂದು ಅಳ್ವೆಕೋಡಿ ಬಂದರಿನಿಂದ ಜಲ ವಿಜಯ ಎಂಬ ಬೋಟ್ ಮೀನುಗಾರಿಕೆ ತೆರಳಿದ್ದ ವೇಳೆ ಸಮುದ್ರ ಮಧ್ಯದ ಶಿರಾಲಿ ಕುಂದದ ಸಮೀಪ ಮೀನಿಗಾಗಿ ಬಲೆ ಬೀಸಿದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲಿಗೆ ಬಲೆ ಸಿಲುಕಿ ಸಮುದ್ರದಲ್ಲಿ ಬಿದ್ದವನ್ನು ತಕ್ಷಣ ಬೋಟ್ ಮಾಲೀಕ ಹಾಗೂ ಉಳಿದ ಮೀನುಗಾರರು ಸೇರಿ ಆತನನ್ನು ರಕ್ಷಣೆ ಮಾಡಿ ಅಳ್ವೆಕೊಡಿ ಧಕ್ಕೆಗೆ ತಂದು ಅಲ್ಲಿಂದ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top