ಯಲ್ಲಾಪುರ: ತಾಲೂಕಿನ ಕಿರವತ್ತಿ ಚೆಕ್ ಪೋಸ್ಟ್ನಲ್ಲಿ ಯಾವುದೇ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ೧.೨೦ ಲಕ್ಷ ಹಣವನ್ನು ಎಸ್.ಎಸ್.ಟಿ ಅರವಿಂದ ಬೇವಿನಗಿಡದ ತಂಡ ಗುರುವಾರ ಸಂಜೆ ವಶಪಡಿಸಿಕೊಂಡಿದೆ. ವಿಶ್ವನಾಥ ಲೊಕ್ಕಯ್ಯ ಶೆಟ್ಟಿ ಮಹಾರಾಷ್ಟ್ರದ ಪುಣೆ ಇವರು ಯಾವುದೆ ದಾಖಲೆ ಇಲ್ಲದೇ ಹಣವನ್ನು ವಾಹನದಲ್ಲಿ ಸಾಗಿಸುತ್ತಿದ್ದರು.ತನಿಖಾ ತಂಡ ತಪಾಸಣೆಗೊಳಪಡಿಸಿದಾಗ ಆಧಾರವಿಲ್ಲದ ಕಾರಣ ಅದನ್ನು ವಶಕ್ಕೆ ಪಡೆದುಕೊಂಡಿದ್ದು ಜಿಲ್ಲಾ ಮಾದರಿ ನೀತಿ ಸಂಹಿತೆ ಅನುಷ್ಠಾನಾಧಿಕಾರಿಗಳಿಗೆ ವರದಿ ಮಾಡಿದ್ದಾರೆ.
ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಹಣ ವಶಕ್ಕೆ
![](https://euttarakannada.in/wp-content/uploads/2024/03/IMG-20240329-WA0106-652x438.jpg)