Slide
Slide
Slide
previous arrow
next arrow

ಇನ್ನರ್ ವ್ಹೀಲ್ ಭಗಿನಿಯರಿಂದ ಮಜ್ಜಿಗೆ ಸೇವೆ

300x250 AD

ಶಿರಸಿ: ಸರ್ವಾಲಂಕಾರಭೂಷಿತೆ ಶಿರಸಿ ಶ್ರೀ ಮಾರಿಕಾಂಬೆಯನ್ನು ಮೆರವಣಿಗೆಯ ತೇರಿನಲ್ಲಿ ಆಗಮಿಸಿ ಬಿಡ್ಕೀಬೈಲ್ ಗದ್ದುಗೆಯಲ್ಲಿ ಮಾ.20, ಬುಧವಾರ ವಿರಾಜಮಾನಳಾಗಿದ್ದಾಳೆ. ಈ ಸಮಯದಲ್ಲಿ ಸೇರಿದ ಭಕ್ತಸಾಗರಕ್ಕೆ ಉತ್ಕೃಷ್ಟ ಮಸಾಲಾ ಮಜ್ಜಿಗೆಯನ್ನು ಶಿರಸಿ ಹೆರಿಟೇಜ್ ಇನ್ನರ್ ವ್ಹೀಲ್ ಕ್ಲಬ್ಬಿನ ಸದಸ್ಯ ಭಗಿನಿಯರು ಅತ್ಯಂತ ಸಂಭ್ರಮದಿಂದ ಹಂಚಿದರು. ಈ ಸಂದರ್ಭದಲ್ಲಿ ಶಾಸಕ ಭೀಮಣ್ಣ ನಾಯ್ಕ ವ್ಯವಸ್ಥೆಯಿಂದ ಹರ್ಷಿತರಾಗಿ ತಾವೂ ತುಸುಕಾಲ ಸೇವೆ ನೀಡಿದ್ದು ವಿಶೇಷವಾಗಿತ್ತು.
ಸತತ ನಾಲ್ಕನೇ ವರುಷದ ಈ ಸೇವೆಯನ್ನು ಎ.ಕೆ. ಎಂಟರ್‌ಪ್ರೈಸಸ್ ಎದುರುಗಡೆಯಲ್ಲಿ 30ಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ಮಹಿಳೆಯರು ಸುಮಾರು‌ 5ಸಾವಿರದಷ್ಟು ಸಂಖ್ಯೆಯ ಜಾತ್ರಾರ್ಥಿಗಳ ಬಾಯಾರಿಕೆಯನ್ನು ಇಂಗಿಸಿದ್ದಾರೆಂದು ಅಧ್ಯಕ್ಷೆ ಪುಷ್ಪಲತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top