Slide
Slide
Slide
previous arrow
next arrow

ಕಾಗದ ಕಾರ್ಖಾನೆ ಯಂತ್ರದಡಿ ಸಿಲುಕಿದ ಕಾರ್ಮಿಕ: ಗಂಭೀರ ಗಾಯ

300x250 AD

ದಾಂಡೇಲಿ : ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಚಿಪ್ಪರ್ ಹೌಸ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರೋರ್ವರು ಯಂತ್ರದಡಿ ಸಿಲುಕಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಸ್ಥಳೀಯ ನಿರ್ಮಲನಗರದ‌ ನಿವಾಸಿ 35 ವರ್ಷ ವಯಸ್ಸಿನ ಶ್ರೀಕಾಂತ ಲಕ್ಷ್ಮಣ ಹರಿಜನ ಎಂಬವರೇ ಗಂಭೀರ ಗಾಯಗೊಂಡು ಕಾಲು ಕಳೆದಕೊಂಡ ನತದೃಷ್ಟ ಕಾರ್ಮಿಕನಾಗಿದ್ದಾನೆ. ಗಂಭೀರ ಗಾಯಗೊಂಡ ಇವರು ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಯಂತ್ರದಡಿ ಸಿಲುಕಿದ ಶ್ರೀಕಾಂತ ಲಕ್ಷ್ಮಣ ಹರಿಜನ ಇವರ ಎರಡು ಕಾಲುಗಳಿಗೆ ಗಂಭೀರ ಗಾಯವಾಗಿದ್ದು, ಅದರಲ್ಲಿ ಒಂದು ಕಾಲನ್ನು ಕಳೆದುಕೊ‌ಡಿದ್ದು, ಇನ್ನೊಂದು ಕಾಲನ್ನು ಉಳಿಸಿಕೊಳ್ಳಲು ಶಸ್ತ್ರಚಿಕಿತ್ಸೆ ಮಾಡುವ ತಯಾರಿ ನಡೆಯುತ್ತಿದೆ.

300x250 AD

ಎರಡು ವರ್ಷದ ಸಣ್ಣ ಮಗುವನ್ನು ಹೊಂದಿರುವ ಶ್ರೀಕಾಂತ ಲಕ್ಷ್ಮಣ ಹರಿಜನ ಅವರದ್ದು ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ಕುಟುಂಬವಾಗಿದೆ. ಇಡೀ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಶ್ರೀಕಾಂತ ಲಕ್ಷ್ಮಣ ಹರಿಜನ ಅವರು ಇದೀಗ ಆಸ್ಪತ್ರೆಯಲ್ಲಿರುವುದರಿಂದ ಅವರ ಕುಟುಂಬ ಇದೀಗ ಕಣ್ಣೀರಿನಲ್ಲಿ ಬದುಕುವಂತಾಗಿದೆ.

Share This
300x250 AD
300x250 AD
300x250 AD
Back to top