Slide
Slide
Slide
previous arrow
next arrow

ಡಾ.ಪುನೀತ್ ರಾಜಕುಮಾರ್ ಜನ್ಮದಿನ: ಅಭಿಮಾನಿಗಳಿಂದ ಅನ್ನ ಸಂತರ್ಪಣೆ

300x250 AD

ಭಟ್ಕಳ: ದಿವಂಗತ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದಂದು ಅಗಲಿದ ಅಪ್ಪುವಿನ ನೆನಪಿನಲ್ಲಿ ಅಭಿಮಾನಿಗಳು ಹಲವು ಕಾರ್ಯಕ್ರಮಗಳನ್ನು ರಾಜ್ಯದೆಲ್ಲೆಡೆ ಹಮ್ಮಿಕೊಂಡಿದ್ದಾರೆ. ಅದೇ ರೀತಿ ಭಟ್ಕಳ ಬಸ್ ನಿಲ್ದಾಣ ಪಕ್ಕದಲ್ಲಿ ದಿ.ಡಾ.ಪುನೀತ್ ರಾಜಕುಮಾರ ಜನ್ಮದಿನ ಪ್ರಯುಕ್ತ ಕರ್ನಾಟಕ ರತ್ನ ಅಪ್ಪು ಅಭಿಮಾನಿಗಳ ಸೇವಾದಳ ಭಟ್ಕಳ ವತಿಯಿಂದ ಸಾರ್ವಜನಿಕರಿಗೆ ಉಚಿತ ಅನ್ನದಾನ ನಡೆಸಿದರು.

ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿ ದಿ. ಪುನೀತ್ ರಾಜಕುಮಾರ ಫೋಟೋಗೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಅಪ್ಪು ಅಭಿಮಾನಿ ತಿಮ್ಮಯ್ಯ ನಾಯ್ಕ ಮಾತನಾಡಿ ಅಪ್ಪು ಜೀವಂತವಿದ್ದಾಗ ಎಷ್ಟೋ ಅನಾಥ ಹಾಗೂ ನಿರ್ಗತಿಕರಿಗೆ ಅಸರೆಯಾಗಿದ್ದರು ಅವರ ಆದರ್ಶದಂತೆ ಅವರ ಹುಟ್ಟುಹಬ್ಬದ ದಿನವಾದ ಇಂದು ನಮ್ಮ ಅಭಿಮಾನಿ ಬಳಗದಿಂದ ಭಟ್ಕಳದ ಜನತೆಗೆ ಒಂದು ಹೊತ್ತಿನ ಊಟ ನೀಡಿ ಅವರ ಹಸಿವು ನೀಗಿಸುವ ಕೆಲಸ ಮಾಡಿದ್ದೇವೆ ಎಂದ ಅವರು ಸುಮಾರು ಒಂದು ಸಾವಿರ ಜನರಿಗೆ ಅನ್ನದಾನ ಸೇವೆ ನಡೆಸಿದ್ದೇವೆ ಎಂದರು. ಪುನೀತ್ ರಾಜಕುಮಾರ್ ಹೆಸರಿನಲ್ಲಿ ಪ್ರತಿ ತಿಂಗಳಿಗೊಮ್ಮೆ ಏನಾದರೂ ಒಂದು ಸಹಾಯ ಮಾಡುವ ಕಾರ್ಯ ಮಾಡುತ್ತೇವೆ ಎಂದರು.

300x250 AD

ಈ ವೇಳೆ ಅಭಿಮಾನಿಗಳಾದ ಗಣಪತಿ ಗೊರಟೆ, ಗಣಪತಿ ನಾಯ್ಕ, ಅಶೋಕ ನಾಯ್ಕ, ರಾಘು ನಾಯ್ಕ, ರೇವಂತ ಅಭಿಷೇಕ ನಾಯ್ಕನಾಯ್ಕ, ಪ್ರಮೋದ ನಾಯ್ಕ, ವೆಂಕಟರಮಣ ನಾಯ್ಕ ಇದ್ದರು.

Share This
300x250 AD
300x250 AD
300x250 AD
Back to top