Slide
Slide
Slide
previous arrow
next arrow

ಸಂಸದ ಅನಂತಕುಮಾರ ನಾಮ ಸ್ಮರಣೆ ಮಾಡಿದ ಸಿಎಂ ಸಿದ್ದರಾಮಯ್ಯ

300x250 AD

ಶಿರಸಿ: ಹೆಲಿಪ್ಯಾಡ್ ಇಳಿದು ಬರುವುದರಿಂದಲೇ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಮೇಲೆ ತಮ್ಮ ಎಂದಿನ ಮೊನಚಾದ ಮಾತಿನ ಮೂಲಕ ಹರಿಹಾಯ್ಯುವ ಮೂಲಕ ಆಗಮಿಸಿದ ಸಿಎಂ ಸಿದ್ದರಾಮಯ್ಯ ಕದಂಬೋತ್ಸವದ ವೇದಿಕೆ ಕಾರ್ಯಕ್ರಮ ಮುಗಿಸುವವರೆಗೂ ಧರ್ಮ ವಿಭಜಿಸುವವರು ನಾವಲ್ಲ, ಧರ್ಮದ ಹೆಸರಲ್ಲಿ ವಿಷಬೀಜ ಬಿತ್ತಬೇಡಿ ಎಂದು ಪದೇ ಪದೇ ಹೇಳುವ ಮೂಲಕ ಅನಂತಕುಮಾರ ಹೆಗಡೆಯ ನಾಮಸ್ಮರಣೆಯನ್ನೇ ಮಾಡಿದ್ದಾರೆ.

ಅನಂತಕುಮಾರ ಹೆಗಡೆ ಮನುವಾದಿ, ಹಿಂದುತ್ವವಾದಿ ಎಂದು ಆರಂಭಿಸಿದ ಅವರು, ಅನಂತಕುಮಾರ ಇತ್ತೀಚಿಗೆ ಬಿಲದಿಂದ ಹೊರ ಬಂದಿದ್ದಾರೆ. ಅಂತವರಿಗೆ ಮತ್ತೊಮ್ಮೆ ಮತ ನೀಡಬೇಡಿ ಎಂದು ಹೇಳುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಸಂಸದ ಅನಂತ ಕುಮಾರ ಹೆಗಡೆಯನ್ನು ಸೋಲಿಸಲು ಜನರಿಗೆ ಕರೆ ನೀಡಿದರು.

300x250 AD

ಮಯೂರವರ್ಮ ವೇದಿಕೆಯಲ್ಲಿ ಕದಂಬರಿಗಿಂತ ಅನಂತಕುಮಾರ ಹೆಗಡೆ ಕುರಿತಾಗಿಯೇ ಹೆಚ್ಚು ನಾಮಸ್ಮರಣೆ ಮಾಡಿದ್ದಾರೆ ಎಂದು ಸಾರ್ವಜನಿಕರ ಮಾತಾಗಿದೆ.

Share This
300x250 AD
300x250 AD
300x250 AD
Back to top