Slide
Slide
Slide
previous arrow
next arrow

ಹಿರಿಯ ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಬಲವರ್ಧನೆಯಾಗಿದೆ: ಆನಂದ್ ಸಾಲೇರ್

300x250 AD

ಶಿರಸಿ: ಪಂಡಿತ್ ದೀನ್ ದಯಾಳ್ ಭವನದಲ್ಲಿ ದೇವತಾ ಪೂಜೆ ಹಾಗು ಗಣಹೋಮ ಪೂಜಾ ಕಾರ್ಯಕ್ರಮ ಅನ್ನಪ್ರಸಾದ ವಿತರಣೆ ಕಾರ್ಯಕ್ರಮ ಮಾ.4,ಸೋಮವಾರದಂದು ಯಶಸ್ವಿಯಾಗಿ ನಡೆಯಿತು.

ಈ ಸಂಧರ್ಭದಲ್ಲಿ ಎಲ್ಲಾ ಮಾಜಿ ನಗರ ಮಂಡಲ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ದಿ.ಜಿ.ಎಮ್. ನಾಯ್ಕ ಅವರ ಮಗ ಎಮ್.ಜಿ.ನಾಯ್ಕ, ದಿ. ವಿನೋದ್ ಮಡಗಾoವ್ಕರ್ ಪರವಾಗಿ ಅವರ ಪತ್ನಿ ಸನ್ಮಾನ ಸ್ವೀಕರಿಸಿದರು‌. ನಂತರ ವಿವೇಕಾನಂದ ವೈದ್ಯ, ಶಶಿ ಪಂಡಿತ್, ಶ್ರೀಕಾಂತ ನಾಯ್ಕ, ನಂದನ್ ಸಾಗರ್, ಗಣಪತಿ ನಾಯ್ಕ, ರಾಜೇಶ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.

300x250 AD

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ್ ಶಿರಸಿ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ನಗರ ಮಂಡಲ ಅಧ್ಯಕ್ಷರು ಆನಂದ ಸಾಲೇರ ಮಾತನಾಡಿ ಹಿರಿಯ ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಇಂದು ಸಂಘಟಿತವಾಗಿ ಬಲವರ್ಧನೆ ಹೊಂದಿದೆ, ಅವರನ್ನು ಸ್ಮರಿಸಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ನಾವು ಒಂದಾಗಿ ಪಕ್ಷ ಮತ್ತಷ್ಟು ಗಟ್ಟಿಗೊಳಿಸೋಣ ಎಂದು ಕರೆ ಕೊಟ್ಟರು. ಸನ್ಮಾನಿತರಾದ ವಿವೇಕಾನಂದ ವೈದ್ಯ ಹಾಗೂ ಗಣಪತಿ ನಾಯ್ಕ ತಮ್ಮ ಅನಿಸಿಕೆ ಹಂಚಿಕೊಂಡರು. ಜಿಲ್ಲಾ ಕಾರ್ಯದರ್ಶಿ ಶರ್ಮಿಳಾ ಮಾದನಗೆರಿ ಮತ್ತು ಜಿಲ್ಲಾ ಖಜಾಂಚಿ ರಮಾಕಾಂತ್ ಭಟ್ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಕುಮಾರ್ ಬೋರ್ಕರ್, ಗ್ರಾಮೀಣ ಅಧ್ಯಕ್ಷೆ ಉಷಾ ಹೆಗಡೆ ಅವರು ಉಪಸ್ಥಿತರಿದ್ಧರು. ಮಹಾಂತೇಶ್ ಹಾದಿಮನೆ ಕಾರ್ಯಕ್ರಮ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top