Slide
Slide
Slide
previous arrow
next arrow

ಫೆ.27ಕ್ಕೆ ‘ಲೀಲಾವತಾರಮ್’ ಯಕ್ಷ ರೂಪಕ ಪ್ರದರ್ಶನ

300x250 AD

ಶಿರಸಿ: ಇಲ್ಲಿನ ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕವು‌ ತಾಲೂಕಿನ ಜಡ್ಡಿಗದ್ದೆಯ ಕೊಡ್ನಗದ್ದೆ ಗ್ರಾಮ ಪಂಚಾಯತಿಯಲ್ಲಿ ಫೆ.27ರ ಸಂಜೆ 6.15ಕ್ಕೆ ಸನ್ಮಾನ ಹಾಗೂ ವಿಶ್ವಶಾಂತಿ ಸರಣಿಯ 9ನೇ ಯಕ್ಷ ರೂಪಕ ಪ್ರದರ್ಶನ ಹಮ್ಮಿಕೊಂಡಿದೆ.

ಯಕ್ಷಗಾನದ ಭಾಗವತ ಗಜಾನನ ಭಾಗವತ ತುಳಗೇರಿಮಠ ಅವರಿಗೆ ಸಮ್ಮಾನ ಹಮ್ಮಿಕೊಳ್ಳಲಾಗಿದ್ದು, ಪ್ರಸಿದ್ಧ ಚಿತ್ರ ನಟ ನೀರ್ನಳ್ಳಿ ರಾಮಕೃಷ್ಣ ಸಮ್ಮಾನ ನಡೆಸಲಿದ್ದಾರೆ.

ಅತಿಥಿಗಳಾಗಿ ಧಾರವಾಡ ಹಾಲು ಒಕ್ಕೂಟ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಪಂಚಾಯ್ತಿ ಅಧ್ಯಕ್ಷ ರಾಘವೇಂದ್ರ ಹೆಗಡೆ ಸಂಪೆಗದ್ದೆ, ಸಾಮಾಜಿಕ‌ ಕಾರ್ಯಕರ್ತ ಪ್ರವೀಣ ಹೆಗಡೆ ಮಣ್ಮನೆ ಪಾಲ್ಗೊಳ್ಳಲಿದ್ದು, ಅಧ್ಯಕ್ಷತೆಯನ್ನು ಟ್ರಸ್ಟ್ ಉಪಾಧ್ಯಕ್ಷ ರಮೇಶ ಹೆಗಡೆ ಹಳೇಕಾನಗೋಡ ವಹಿಸಿಕೊಳ್ಳುವರು.

300x250 AD

ಬಳಿಕ 40 ನಿಮಿಷ ಅವಧಿಯ ಪ್ರೋ.ಎಂ.ಎ.ಹೆಗಡೆ ವಿರಚಿತ, ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ ನಿರ್ದೇಶನದ ಲೀಲಾವತಾರಮ್ ಯಕ್ಷ ‌ನೃತ್ಯ ರೂಪಕವನ್ನು ಕು. ತುಳಸಿ ಹೆಗಡೆ ಶಿರಸಿ ಪ್ರಸ್ತುತಗೊಳಿಸಲಿದ್ದಾಳೆ‌. ಹಿಮ್ಮೇಳದಲ್ಲಿ ಪ್ರಸಿದ್ಧ ಕಲಾವಿದರಾದ ಭಾಗವತ ಕೇಶವ ಹೆಗಡೆ ಕೊಳಗಿ, ಮದ್ದಲೆಯಲ್ಲಿ ಶಂಕರ ಭಾಗವತ್ ಯಲ್ಲಾಪುರ, ಚಂಡೆಯಲ್ಲಿ ವಿಘ್ನೇಶ್ವರ ಗೌಡ, ಪ್ರಸಾಧನದಲ್ಲಿ ಉಮೇಶ ಹೆಗಡೆ ಸಹಕಾರ ನೀಡಲಿದ್ದಾರೆ ಎಂದು ಪ್ರಕಟನೆಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top